- Advertisement -
- Advertisement -
ವಿಟ್ಲ: ಕಾರು ಚಾಲಕ ಮಾಲಕರ ಸಂಘ ವಿಟ್ಲ ಇದರ ವತಿಯಿಂದ ಸಂಘದ ಎಲ್ಲಾ ಟೂರಿಸ್ಟ್ ಚಾಲಕರಿಗೆ ತಲಾ 2000 ರೂ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ನೀಡಲಾಯಿತು.
ಈ ವಿತರಣಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ವಿಟ್ಲ, ಕಾರ್ಯದರ್ಶಿ ಜಗತ್ ಶಾಂತಪಾಲ್ ಚಂದಾಡಿ , ಕೋಶಾಧಿಕಾರಿ ಸದಾಶಿವ ಅಳಿಕೆ, ಉಪಾಧ್ಯಕ್ಷರುಗಳಾದ ನಾರಾಯಣ, ಈಶ್ವರ ಮೂಲ್ಯ ಮತ್ತು ಭರತ್ , ಸ್ಥಾಪಕಾಧ್ಯಕ್ಷ ಪ್ರಭಾಕರ ದೈವಗುಡ್ಡೆ ಹಾಗೂ ಸದ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ದಲ್ಲಿ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ರುವ ಸಂಘದ ಉಪಾಧ್ಯಕ್ಷ ದಿನಕರ ಶೆಟ್ಟಿ ಯವರಿಗೆ ಆಸ್ಪತ್ರೆ ಖರ್ಚಿಗಾಗಿ 10000 ರೂಪಾಯಿಯನ್ನು ಸಂಘದ ಅಧ್ಯಕ್ಷ ಪ್ರಕಾಶ್ ನೀಡಿದರು.
- Advertisement -