- Advertisement -
- Advertisement -
ವಿಟ್ಲ ಪಡ್ನೂರ್ ರಾಧುಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ತ್ಯ ದಿನಾಚರಣೆ ಮಾಡಲಾಯಿತು. ಭಾಲವಿಕಾಸ ಸಮಿತಿ ಅಧ್ಯಕ್ಷೆ ಶಾಜಿದ ಸಲಿಮ್ ಧ್ವಜಾರೋಹಣಗೈದರು ಹಾಗೂ ವಿಟ್ಲ ಪಡ್ನೂರು ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ ಅಶ್ಮಿತಾ ಹಾಗೂ ಅಂಗನವಾಡಿ ಕೇಂದ್ರಕ್ಕೆ ಉದಾರ ದೇಣಿಗೆ ನೀಡಿದ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಉಪಾಧ್ಯಕ್ಷ ವಸಂತ ಶೆಟ್ಟಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಪಂಚಾಯಿತ್ ಅಧ್ಯಕ್ಷೆ ರೇಶ್ಮಾ ಶಂಕರಿ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಪ್ರಮುಖರಾದ ಸುದರ್ಶನ್ ಪಡಿಯಾರ್, ಚಂದ್ರ ಶೆಟ್ಟಿ, ಸ್ಥಳೀಯ ಪಂಚಾಯಿತ್ ಸದಸ್ಯರಾದ ಸಂದೇಶ್ ಶೆಟ್ಟಿ ಹಾಗೂ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅಂಗನವಾಡಿ ಕಾರ್ಯಕರ್ತೆ ಸುಜಾತಾ, ಆಶಾಕಾರ್ಯಕರ್ತೆ ಫ್ಲೊಸಿ ಡಿಸೊಜ, ಸ್ಥಳೀಯರಾದ ಸುಮತಿ, ಜಮೀಳ, ಸೆಕಿನ, ಖತೀಜ ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರು ಉಪಸ್ಥಿತರಿದ್ದರು.
- Advertisement -