- Advertisement -
- Advertisement -
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ಬಾಳ್ತಿಲ ಒಕ್ಕೂಟದ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಯನ್ನು. ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಸುಗುಣ ಮತ್ತು ಸೇವಾ ಪ್ರತಿನಿಧಿ ವಿದ್ಯಾ ಬೊಂಡಾಲ ವಲಯ ಅಧ್ಯಕ್ಷೆ ಸಂಧ್ಯಾ ನಾಯ್ಕ್ ಗುಂಡೂರು ಇವರ ಉಪಸ್ಥಿತಿಯಲ್ಲಿ ನಡೆಯಿತು.
ನೂತನ ಅಧ್ಯಕ್ಷ ಉಮಾವತಿ ಪೂರ್ಲಿಪಾಡಿ, ಉಪಾಧ್ಯಕ್ಷರಾಗಿ ಉಷಾ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಬೋಲ್ಪೋಡಿ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಗುಂಡೂರು, ಕೋಶಾಧಿಕಾರಿಯಾಗಿ ರೋಹಿತ್ ಕಾಂಪ್ರಬೈಲು, ಉಪಸಮಿತಿ ಸದಸ್ಯರಾಗಿ ನೇತ್ರಾವತಿ, ರತ್ನ, ಪೂರ್ಣಿಮಾ, ಲೀಲಾ ಉಮೇಶ್ ಪುರ್ಲಿ ಪಾಡಿಯವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಾಳ್ತಿಲ ಒಕ್ಕೂಟದ ಸ್ವಸಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
- Advertisement -