ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಡಿ. 31 ನೇ ಆದಿತ್ಯವಾರ ಮತ್ತು ಜ.1 ನೇ ಸೋಮವಾರದಂದು ನಡೆಯಲಿದೆ. ಈ ಬಗ್ಗೆ ಪತ್ರಿಕಾ ಗೋಷ್ಠಿ ಕಾರ್ಯಕ್ರಮ ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅರುಣ್ ಕುಮಾರ್ ವಿಟ್ಲ ಅಧ್ಯಕ್ಷರು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ) ವಿಟ್ಲ, ಮಾತನಾಡಿ ಡಿ. 31 ನೇ ಆದಿತ್ಯವಾರ ಬೆಳಿಗ್ಗೆ 8:30 ಕ್ಕೆ ಗಣಪತಿ ಹೋಮ, ನಾಗತಂಬಿಲ, ಬೆಳಿಗ್ಗೆ 11:00 ಕ್ಕೆ ಕಲಶಾಭಿಷೇಕ ಅನಂತರ ಮಧ್ಯಾಹ್ನ 12:00 ಕ್ಕೆ ತುಲಾಭಾರ ಸೇವೆ, ಮಹಾಪೂಜೆ , ಅನ್ನಸಂತರ್ಪಣೆ, ಅಪರಾಹ್ನ 5:00 ರಿಂದ ರಂಗಪೂಜೆ, ದುರ್ಗಾಪೂಜೆ, ಉತ್ಸವಬಲಿ, ರಾತ್ರಿ ಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ಜ.1ನೇ ಸೋಮವಾರ ಬೆಳಿಗ್ಗೆ 7:00 ರಿಂದ ಶ್ರೀ ಭೂತಬಲಿ, ದರ್ಶನ ಬಲಿ ರಾಜಾಂಗಣ ಪ್ರಸಾದ, ಬೆಳಿಗ್ಗೆ ಪೂಜೆ, ಮಧ್ಯಾಹ್ನ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಅನಂತರ ಅಪರಾಹ್ನ 5:00 ರಿಂದ ಕಲಶ ಪೂರಣೆ, ಪೇಟೆ ಸವಾರಿ, ಶುದ್ದ ಕಲಶಾಭಿಶೇಕ, ರಾತ್ರಿ ಪೂಜೆ, ರಾತ್ರಿ 10:00 ಕ್ಕೆ ಮಂತ್ರಾಕ್ಷತೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ, ಮಂಗಳೂರು (ದ.ಕ)ಇವರಿಂದ ದಕ್ಷಾಧ್ವರ- ಮಕರಜ್ಯೋತಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿ ರಮಾನಾಥ ವಿಟ್ಲ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ದರ್ಣಪ್ಪ ಗುರುಸ್ವಾಮಿ, ಯಾದವ ಬಂಗೇರ, ಸುರೇಶ್ ಬನಾರಿ, ಹರೀಶ್ ಕಾಶಿಮಠ, ಬಾಲಕೃಷ್ಣ , ಲೋಕೇಶ್, ಅರ್ಚಕ ವಿಜೇತ ಭಟ್ ಮೊದಲಾದವರು ಉಪಸ್ಥಿತರಿದ್ದರು.