ಯುವಕಯೊಬ್ಬ ವೃದ್ಧೆಯನ್ನು ಕೊಂದು ಮಾಂಸವನ್ನು ತಿಂದಿರುವ ವಿಚಿತ್ರ ಘಟನೆ ವರದಿಯಾಗಿದೆ. ರಾಜಸ್ಥಾನದ ಪಾಲಿ ಜಿಲ್ಲೆಯ ಸೆಂದ್ರಾ ಅರಣ್ಯದಲ್ಲಿ ಈ ಘಟನೆ ನಡೆದಿದೆ. ವೃದ್ಧೆಯನ್ನು ಕೊಂದು ಮುಖವನ್ನು ಪರಚಿದ್ದ, ಬಳಿಕ ತೋಳ, ನಾಯಿಯಂತೆ ಮುಖವನ್ನು ಮೇಲಕ್ಕೆ ಮಾಡಿ ಪ್ರಾಣಿಗಳಂತೆ ಕೂಗಾಡುತ್ತಿದ್ದ ಎಂದು ಅಲ್ಲಿನ ಮಾಧ್ಯಮ ಮೂಲಗಳು ತಿಳಿಸಿದೆ. ಆರೋಪಿ ಯುವಕನನ್ನು ಪಾಲಿಯ ಬಂಗಾರ್ ಆಸ್ಪತ್ರೆಯಿಂದ ಜೋಧಪುರದ ಎಂಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ರೇಬಿಸ್ ಮತ್ತು ಹೈಡ್ರೋಫೋಬಿಯಾಕ್ಕೆ ಸುರೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನಿಗೆ ಆಗಾಗ ವಿಪರೀತ ಕೋಪ ಬರುತ್ತಿದೆ. ಅದು ಆತನನ್ನು ಹಿಂಸಾತ್ಮಕವಾಗಿಸುತ್ತಿದೆ. ತಮಗೂ ಕಚ್ಚಿಬಿಟ್ಟರೆ ಎನ್ನುವ ಭಯದಲ್ಲಿ ವೈದ್ಯಕೀಯ ಸಿಬ್ಬಂದಿ ಇದ್ದಾರೆ. ಯುವಕನು ಬಾಯಲ್ಲಿ ಜೊಲ್ಲು ಸುರಿಸುತ್ತಿರುವ ಕಾರಣ ಬೇರೆಯವರಿಗೂ ಈ ಕಾಯಿಲೆ ಹರಡಬಹುದು ಎಂದು ಭಯಗೊಂಡಿದ್ದಾರೆ.
ಯುವಕನ ಜೇಬಿನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ದೊರೆತಿದ್ದು, ರೇಬಿಸ್ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಈ ಕಾಯಿಲೆಯಿಂದಾಗಿ ಯುವಕ ಅತ್ಯಂತ ಹಿಂಸಾತ್ಮಕ ರೂಪಕ್ಕೆ ಹೋಗುತ್ತಿದ್ದಾನೆ. ಈ ಯುವಕನಿಗೆ ಹುಚ್ಚುನಾಯಿ ಕಚ್ಚಿರಬಹುದು ಆದರೆ, ಲಸಿಕೆ ಹಾಕಿಸಲಿಲ್ಲ, ನಾಯಿಯ ಹೊರತಾಗಿ, ತೋಳ, ನರಿ, ಕತ್ತೆಕಿರುಬ, ನರಿ, ಮಂಗ ಅಥವಾ ಇತರ ಪ್ರಾಣಿಗಳ ಕಡಿತದಿಂದಲೂ ರೇಬೀಸ್ ಉಂಟಾಗುತ್ತದೆ.
ಯುವಕನ ಕೈಕಾಲು ಕಟ್ಟಿ ಆಸ್ಪತ್ರೆಗೆ ಕರೆತರಲಾಗಿದೆ. ಆತನನ್ನು ನಿಯಂತ್ರಣಕ್ಕೆ ತರಲು ಚಚ್ಚುಮದ್ದು ನೀಡಬೇಕಾಯಿತು. ಆತನ ಸ್ಥಿತಿ ಹದಗೆಡುತ್ತಿದ್ದಂತೆ, ವೈದ್ಯಕೀಯ ಮಂಡಳಿಯ ತಂಡವು ಆತನನ್ನು ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ಶಿಫಾರಸು ಮಾಡಲು ನಿರ್ಧರಿಸಿತು. ಚಿಕಿತ್ಸೆಗಾಗಿ ಜೋಧಪುರಕ್ಕೆ ಕಳುಹಿಸಲಾಗಿದೆ.