Thursday, May 9, 2024
spot_imgspot_img
spot_imgspot_img

ಬ್ರಹ್ಮಾವರ: ವಿದ್ಯುತ್ ಕಂಬ ಮುರಿದು ಬಿದ್ದು ಕಾರ್ಮಿಕ ಸಾವು

- Advertisement -G L Acharya panikkar
- Advertisement -

ಬ್ರಹ್ಮಾವರ: ವಿದ್ಯುತ್ ಕಂಬ ಮುರಿದು ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಕೆಂಜೂರು ಪಾದೆಮಠದ ಬಳಿ ನಡೆದಿದೆ.

ಮೃತ ಕಾರ್ಮಿಕ ರಾಂಪಕ್ ಬೋರೊ (20) ಎಂದು ಗುರುತಿಸಲಾಗಿದೆ.

ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿ ಕೊಕ್ಕರ್ಣೆ-ಹೆಬ್ರಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈ ಸಂದರ್ಭ ಸಂಚಾರ ಬಂದ್ ಮಾಡಿ ಕಂಬ ಅಳವಡಿಕೆ ಕೆಲಸ ಮಾಡುತ್ತಿದ್ದು, ಸಂಚಾರ ಬಂದ್ ಮಾಡಿದ ಕಾರಣ ವಾಹನ ದಟ್ಟಣೆ ಅಧಿಕವಾದಾಗ ಮರದ ಗೆಲ್ಲನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ಸಂದರ್ಭದಲ್ಲಿ ಚಲಿಸಿದ ಏಸ್ ವಾಹನದ ಚಕ್ರಕ್ಕೆ ತಂತಿ ಸಿಲುಕಿ ತಂತಿ ಕಟ್ಟಿದ್ದ ಕಂಬದ ಮಧ್ಯಭಾಗ ತುಂಡಾಗಿದ್ದು, ಕಂಬದಲ್ಲಿ ಕೆಲಸ ಮಾಡುತ್ತಿದ್ದ ರಾಂಪಕ್ ಬೋರೊ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!