Thursday, April 25, 2024
spot_imgspot_img
spot_imgspot_img

ಯಕ್ಷಗಾನ ಕಲಾವಿದ ಡಿ.ಎಸ್.ಶ್ರೀಧರ್ ಗೆ ಪಾರ್ತಿಸುಬ್ಬ ಪ್ರಶಸ್ತಿ!

- Advertisement -G L Acharya panikkar
- Advertisement -

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ರಚನೆಕಾರ ಡಿ.ಎಸ್.ಶ್ರೀಧರ್ ಭಾಜನರಾಗಿದ್ದಾರೆ.


ಮಂಗಳೂರಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಈ ಮಾಹಿತಿ ನೀಡಿದ್ದಾರೆ.
ಗೌರವ ಪ್ರಶಸ್ತಿಗೆ ಬಿ.ಸಂಜೀವ ಸುವರ್ಣ, ಕೆ ತಿಮ್ಮಪ್ಪ ಗುಜರನ್ ( ಮರಣೋತ್ತರ), ಡಾ. ವಿಜಯ ನಳಿನಿ ರಮೇಶ್, ಡಾ. ಚಕ್ಕೆರೆ ಶಿವಶಂಕರ್, ಬಿ.ಪರಶುರಾಮ್ ಆಯ್ಕೆಯಾಗಿದ್ದಾರೆ.


ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ತೀರ್ಥಹಳ್ಳಿ ಗೋಪಾಲ ಆಚಾರ್ಯ, ಬೇಲ್ತೂರು ರಮೇಶ್, ಆವರ್ಸೆ ಶ್ರೀನಿವಾಸ ಮಡಿವಾಳ,ಹರಿನಾರಾಯಣ ಬೈಪಡಿತ್ತಾಯ, ಸಂಜಯ್ ಕುಮಾರ್ ಶೆಟ್ಟಿ, ಎಂ.ಆರ್. ಹೆಗಡೆ ಕಾನಗೋಡ, ಸುಬ್ರಹ್ಮಣ್ಯ ಧಾರೇಶ್ವರ, ವಿಟ್ಲ ಶಂಭು ಶರ್ಮ, ಹನುಮಂತರಾಯಪ್ಪ, ಎ.ಎಂ.ಮಳವಾಲಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

- Advertisement -

Related news

error: Content is protected !!