- Advertisement -
- Advertisement -
ಧಾರವಾಡ: ಧಾರವಾಡ ಜಿಲ್ಲಾ ಪಂ. ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ಗೆ ಸಪ್ಲಿಮೆಂಟರಿ ಚಾರ್ಜ್ ಶೀಟ್ ಸಲ್ಲಿಸಿದೆ. ಮಾಜಿ ಮಂತ್ರಿ ವಿನಯ್ ಕುಲಕರ್ಣಿ ಹಾಗೂ ಮತ್ತಿಬ್ಬರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
2016 ರ ಫೆಬ್ರವರಿ ತಿಂಗಳಿನಲ್ಲಿ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಸಿಬಿಐ ತನ್ನ ತನಿಖೆಯಲ್ಲಿ ವಿನಯ್ ಕುಲಕರ್ಣಿ ಪಾತ್ರವನ್ನ ಪತ್ತೆ ಮಾಡಿತ್ತು. ಸದ್ಯ ಸಿಬಿಐ ವಿನಯ್ ಕುಲಕರ್ಣಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಈ ಹಿಂದಿನ ಚಾರ್ಜ್ ಶೀಟ್ ನಲ್ಲಿ 8 ಮಂದಿಯ ವಿರುದ್ದ ಚಾರ್ಜ್ ಆಗಿತ್ತು. ಈಗ ಪುನಃ 3 ಮಂದಿಯ ವಿರುದ್ದ ಸಿಬಿಐ ಟೀಂ ಚಾರ್ಜ್ ಶೀಟ್ ತಯಾರಿಸಿ ಕೋರ್ಟ್ನ ಮುಂದಿಟ್ಟಿದೆ.
- Advertisement -