Saturday, May 4, 2024
spot_imgspot_img
spot_imgspot_img

ಕಡಬ: ಸಾಮಾಜಿಕ ಜಾಲತಾಣದಲ್ಲಿ ಯುವತಿ ಖಾತೆ ದುರ್ಬಳಕೆ; ಪಶ್ಚಿಮ ಬಂಗಾಳ ಪೊಲೀಸರ ಬಲೆಗೆ ಬಿದ್ದ ಕಾಂಗ್ರೆಸ್ ಮುಖಂಡನ ಪುತ್ರ

- Advertisement -G L Acharya panikkar
- Advertisement -

ಕಡಬ: ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಖಾತೆಯನ್ನು ದುರ್ಬಳಕೆ ಮಾಡಿರುವ ಆರೋಪದಲ್ಲಿ ಕಡಬದ ಯುವಕನನ್ನು ಪಶ್ಚಿಮ ಬಂಗಾಳದ ಪೊಲೀಸರು ಕಡಬದಲ್ಲಿ ಬಂಧಿಸಿದ ಘಟನೆ ನಡೆದಿದೆ. ಬಂಧಿತನನ್ನು ನೂಜಿಬಾಳ್ತಿಲದ ಯುವಕ ಸಂಜಯ್ ಕೃಷ್ಣ ಎನ್ನಲಾಗಿದೆ.

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ ಯುವತಿಗೆ ಸಂಬAಧಿಸಿದ ಖಾತೆಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲದ ಯುವಕ ಸಂಜಯ್ ಕೃಷ್ಣ ಎಂಬಾತ ನಕಲಿಸಿ ಉಪಯೋಗಿಸಿದ್ದು. ಈ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದಲ್ಲಿ ದೂರು ದಾಖಲಿಸಿದ್ದರು. ಸೈಬರ್ ಕ್ರೈಮ್ ನಡಿ ದೂರು ದಾಖಲಿಸಿಕೊಂಡ ಕಲ್ಕತ್ತಾ ಪೊಲೀಸರು, ಆರೋಪಿಯನ್ನು ಕಡಬದಲ್ಲಿ ಬಂಧಿಸಿದ್ದಾರೆ. ಆರೋಪಿ ಯುವಕನನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!