- Advertisement -
- Advertisement -



ಕಡಬ: ಕಾಣಿಯೂರು ವ್ಯಾಪ್ತಿಯ ನಾಯಿತಡ್ಕ ಎಂಬಲ್ಲಿ ಅವಿವಾಹಿತ ಯುವಕನೋರ್ವ ನಾಪತ್ತೆಯಾಗಿದ್ದು ಹೊಳೆಗೆ ಹಾರಿರುವ ಶಂಕೆಯಿಂದ ಶೋಧ ಕಾರ್ಯ ನಡೆದ ಘಟನೆ ವರದಿಯಾಗಿದೆ.
ಕಾಯಿಮಣ ಗ್ರಾಮದ ನಾಯಿತ್ತಡ್ಕ ನಿವಾಸಿ ಸುರೇಶ (40) ನಾಪತ್ತೆಯಾದ ಯುವಕ.
ಸೋಮವಾರದಿಂದ ಹುಟುಕಾಟ ನಡೆಸಿದರೂ ಪತ್ತೆಯಾಗಿಲ್ಲವೆಂದು ನಾಪತ್ತೆಯಾದ ಯುವಕನ ಸಹೋದರ ಚಿದಾನಂದ ಎಂಬವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಸುರೇಶ ರವರು ಇತ್ತೀಚೆಗ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಈ ಮಧ್ಯೆ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಕಾಪೆಜಾಲು ಹೊಳೆ ಬದಿಯಲ್ಲಿ ಶರ್ಟ್ ಮತ್ತು ಛತ್ರಿ ಪತ್ತೆಯಾಗಿದ್ದು, ಹೊಳೆಗೆ ಬಿದ್ದಿರಬಹುದು ಎನ್ನುವ ಸಂಶಯ ವ್ಯಕ್ತವಾಗಿ ಅಗ್ನಿಶಾಮಕ ದಳದವರು ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಹೊಳೆಯ ನೀರಿನಲ್ಲಿ ಸಂಜೆಯ ತನಕ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
- Advertisement -