Wednesday, May 15, 2024
spot_imgspot_img
spot_imgspot_img

ಯುವಕರ ದಾಂಧಲೆ – ಸಾಮಾಗ್ರಿಗಳಿಗೆ ಹಾನಿ, ಮಾಲಕರಿಗೆ ಜೀವ ಬೆದರಿಕೆ ಆರೋಪ, ಪ್ರಕರಣ ದಾಖಲು

- Advertisement -G L Acharya panikkar
- Advertisement -

ಯುವಕರ ತಂಡವೊಂದು ಕಟ್ಟಡದೊಳಗೆ ಅಕ್ರಮ ಪ್ರವೇಶ ಮಾಡಿ ಕಟ್ಟಡದೊಳಗಿದ್ದ ಸಾಮಾಗ್ರಿಗಳಿಗೆ ಹಾನಿ ಮಾಡಿ, ಕಟ್ಟಡದ ಮಾಲಕರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಕ್ಕಿಲಾಡಿ ಗ್ರಾಮದ ಜಗಜೀವನ್ ರೈ ಎಂಬವರ ಮಾಲಕತ್ವದ ಕಟ್ಟಡಕ್ಕೆ ಸುದರ್ಶನ್, ತಿಮ್ಮಪ್ಪ ಗೌಡ, ವಸಂತ ಕುಂಟನಿ, ರವಿ ನಂದನ್ ಹೆಗ್ಡೆ, ನಾಗರಾಜ, ಶರೀಫ್, ಮತ್ತು ಇತರರು ಬಂದು ಅಕ್ರಮವಾಗಿ ಕಟ್ಟಡದ ಒಳಗೆ ಪ್ರವೇಶಿಸಿ ಮೂರು ಕಂಬಗಳನ್ನು ಬೀಳಿಸಿ, ಕಟ್ಟಡದ ಹಂಚುಗಳಿಗೆ ಹಾನಿ ಮಾಡಿ ಕಟ್ಟಡದ ಒಳಗೆ ನೀರು ಬೀಳುವಂತೆ ಮಾಡಿ ಹಾನಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಟ್ಟಡದ ಮಾಲಕರು ವಿಚಾರಿಸಿದಾಗ ಯುವಕರು ಜೀವ ಬೆದರಿಕೆ ಒಡ್ಡಿರುತ್ತಾರೆ.

ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ ;124/2023 ಕಲಂ: 143.147.448.427.506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!