ಪುತ್ತೂರು: ಬಿಜೆಪಿಯ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ವಿಷಯ ತಿಳಿದು ಅಂತಿಮ ನಮನ ಸಲ್ಲಿಸಲು ಕಾಸರಗೋಡಿನಿಂದ ಆಗಮಿಸಿದ್ದ ಸಂಘ ಪರಿವಾರದ ಹಿರಿಯ ಸ್ವಯಂ ಸೇವಕ ಪಿ. ರಮೇಶ್ ರವರು(ಹುಬ್ಬಳ್ಳಿ ಈಗ್ಲಾ ಮೈದಾನದಲ್ಲಿ ತಿರಂಗಾ ಹಾರಿಸಿದ ತಂಡದಲ್ಲಿದ್ದರು) ಬಂದು ಅಂತಿಮ ನಮನ ಸಲ್ಲಿಸಿಬೆಳ್ಳಾರೆ ಪೇಟೆಯಲ್ಲಿ ನಿಂತಿದ್ದ ಸಂದರ್ಭ ಯಾವುದೇಕಾರಣ ವಿಲ್ಲದೆ ಅವರೊಬ್ಬ ಹಿರಿಯರು ಎಂದು ನೋಡದೆಅವರ ಮೇಲೆಲಾಠಿ ಏಟು ಹಾಕಿದ್ದು, ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಾರ್ಯಕರ್ತರ ಮೇಲೆ ಲಾಠಿ ಏಟು ನಡೆಸಿದ್ದ ಎರಡನೇ ಅಮಾನವೀಯ ಕೃತ್ಯದ ದೃಶ್ಯವೂ ಸೆರೆಯಾಗಿದೆ. ಪೊಲೀಸರ ಈ ಕೃತ್ಯವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಅವರ ಮೇಲೆ ಲಾಠಿಯಿಂದ ಏಟು ನೀಡಿದ ಎಸ್.ಐ. ಮತ್ತು ಇತರರ ಹಾಗೂ ಬೆಳ್ಳಾರೆಯ ಬಾಲಕೃಷ್ಣರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನ ಪ್ರತಿಭಟನೆ ಮಾಡಬೇಕಾದೀತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.