Monday, September 7, 2026
spot_imgspot_img
spot_imgspot_img

ಉಡುಪಿ: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ; ಬಂಕ್ ಗಳೆಲ್ಲ ಬಂದ್ ​

- Advertisement -
- Advertisement -

ಉಡುಪಿ: ದಿನನಿತ್ಯ ಪೆಟ್ರೋಲ್, ಡೀಸೆಲ್ ದರ ಏರುಗತಿಯಲ್ಲೇ ಸಾಗುತ್ತ ಇದೀಗ ಗಗನಕ್ಕೇರಿದೆ. ಬಡಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೆಲವು ಪೆಟ್ರೋಲ್​ ಬಂಕ್​ ಗಳೇ ಬಂದ್​ ಆಗಿವೆ. ಇದರಿಂದ ವಾಹನ ಸವಾರರು ಪೆಟ್ರೋಲ್ ಡಿಸೇಲ್ ಗಾಗಿ ಪರದಾಡುವಂತಾಗಿದೆ.

ಹೌದು, ಇಂತಹ ಸ್ಥಿತಿ ಉಡುಪಿ ಜಿಲ್ಲೆಯಲ್ಲಿ ಕಂಡುಬಂದಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಸ್​ಆರ್ ಹಾಗೂ ನಯರಾ ಪೆಟ್ರೋಲ್ ಬಂಕ್ ಗಳು ಬಂದ್ ಮಾಡಲಾಗಿದೆ​. ಸುಮಾರು 15 ದಿನಗಳಿಂದ ಹಂತ ಹಂತವಾಗಿ ಒಂದೊಂದೇ ಪೆಟ್ರೋಲ್ ಬಂಕ್​ ಸೇವೆ ಸ್ಥಗಿತಗೊಳಿಸಿವೆ. ಅಷ್ಟಕ್ಕೂ, ಹೀಗೆ ದಿಢೀರ್​ ಕ್ಲೋಸ್​ ಮಾಡಲು ಕಾರಣ ಪೂರೈಕೆದಾರರು ಮತ್ತು ಡೀಲರ್​ ಗಳ ನಡುವಿನ ತಿಕ್ಕಾಟ.

ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಡಿಸೇಲ್ ಪೂರೈಕೆದಾರರು ಮತ್ತು ಡೀಲರ್​ ನಡುವಿನ ತಿಕ್ಕಾಟ ಜೋರಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗುವುದರ ಮುನ್ಸೂಚನೆ ಅರಿತ, ಪೂರೈಕೆದಾರರು ಮೊದಲೇ ಸ್ಟಾಕ್ ಮಾಡಿಟ್ಟು ಡೀಲರ್​ ಗಳಿಗೆ ಸರಬರಾಜು ನಿಲ್ಲಿಸಿದ್ದರು. ಇದರಿಂದ ತೀವ್ರ ಸಂಕಷ್ಟ ಅನುಭವಿಸಿದ ಪೆಟ್ರೋಲ್ ಬಂಕ್ ಡೀಲರ್​ ಗಳು ಕಂಗಾಲಾಗಿದ್ದರು. ಸರಬರಾಜು ಸಾಗುತ್ತಿದ್ದರೂ ಉಳಿದ ಬಂಕ್​ ಗಳಿಗಿಂತ 2 ರೂಪಾಯಿ ಹೆಚ್ಚಿನ ದರ ನಿಗದಿಯಾಗಿದ್ದರಿಂದ ಡೀಲರ್​ ಗಳು ಬಂಕ್​ ಗಳನ್ನೇ ಬಂದ್ ಮಾಡಿದ್ದಾರೆ. ನಿಗದಿತ ದರ ಹೆಚ್ಚಳ ಮಾಡಿ ಪೆಟ್ರೋಲ್ ಮಾರಿದರೆ ಬಂಕ್​ ಗಳ ವಿಶ್ವಾಸಾರ್ಹತೆ ಹಾಳಾಗುತ್ತದೆ. ಹೀಗಾಗಿ ಬಂಕ್​ ಕ್ಲೋಸ್​ ಆಗಿದ್ದು ವಾಹನ ಸವಾರರು ಬಂಕ್​ ಕ್ಲೋಸ್​ ಆಗಿದ್ದನ್ನು ನೋಡಿ ಖಾಲಿ ಕೈಯಲ್ಲಿ ವಾಪಸ್ಸಾಗುತ್ತಿದ್ದಾರೆ.

- Advertisement -

Related news

error: Content is protected !!