Saturday, June 28, 2025
spot_imgspot_img
spot_imgspot_img

ಉಪ್ಪಿನಂಗಡಿ: ನೆಕ್ಕಿಲಾಡಿಯಿಂದ ನಾಪತ್ತೆಯಾದ ವ್ಯಕ್ತಿಗೆ ಉಗ್ರರ ಜೊತೆ ನಂಟಿನ ಶಂಕೆ!

- Advertisement -
- Advertisement -

ಉಪ್ಪಿನಂಗಡಿ: ಕಳೆದ ಕೆಲವು ತಿಂಗಳಿಂದ 34 ನೆಕ್ಕಿಲಾಡಿಯಿಂದ ನಾಪತ್ತೆಯಾದ ವ್ಯಕ್ತಿಗೆ ಉಗ್ರರ ಜಾಲದ ಸಂಪರ್ಕ ಇದೆಯೆಂಬ ಮಾಹಿತಿ ಕೇಳಿ ಬರುತ್ತಿದೆ. ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾಗುತ್ತಿದ್ದಂತೆಯೇ ಜನರು ಬೆಚ್ಚಿ ಬಿದ್ದಿದ್ದಾರೆ.

ಉತ್ತರ ಭಾರತದಲ್ಲಿ ಇತ್ತೀಚೆಗೆ ಬಂಧಿತರಾದ ಆರು ಮಂದಿ ಶಂಕಿತ ಉಗ್ರರ ತಂಡದಲ್ಲಿ ಈತನೂ ಇದ್ದಾನೆ ಎನ್ನಲಾಗಿದೆ. ಈ ಉಗ್ರರ ತಂಡ ದಸರಾ ವೇಳೆಯಲ್ಲಿ ಬಾಂಬ್ ಸ್ಪೋಟ ನಡೆಸುವ ಸಂಚು ನಡೆಸಿದ ಹಿನ್ನೆಲೆಯಲ್ಲಿ ಬಂಧನವಾಗಿದೆ.

ನಾಪತ್ತೆಯಾದ ವ್ಯಕ್ತಿ ಉತ್ತರ ಪ್ರದೇಶ ಮೂಲದ ರಫೀಕ್ ಖಾನ್(45) ಎನ್ನಲಾಗಿದೆ. ನೆಕ್ಕಿಲಾಡಿಯಿಂದ ವಿವಾಹವಾಗಿ ಇಲ್ಲಿನ ಫ್ಲಾಟ್ ವೊಂದರಲ್ಲಿ ವಾಸ್ತವ್ಯವಿದ್ದ ಹಾಗೂ ಗ್ಯಾರೇಜೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗುತ್ತಿದೆ. ಜು.18ರಂದು ಈತ ನಾಪತ್ತೆಯಾಗಿದ್ದಎಂದು ತಿಳಿದುಬಂದಿದೆ. ಜು. 17ರಂದು ಬೆಂಗಳೂರಿಗೆಂದು ತೆರಳಿದ್ದ ಈತನು ಮನೆಗೆ 18ರಂದು ಕೊನೆಯ ಕರೆಮಾಡಿದ್ದು, ಬಳಿಕ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!