- Advertisement -
- Advertisement -
6 ವರ್ಷದ ಗಂಡು ಮಗುವನ್ನು ಕೊಲೆ ಮಾಡಿ ಮಾವಿನ ತೋಪಿನಲ್ಲಿ ಹೂತು ಹಾಕಿರುವ ಘಟನೆ ಮುತಕದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆರೋಪಿ ಮಗುವಿನ ದೊಡ್ಡಮ್ಮ ಅಂಬಿಕಾ ಎಂದು ಗುರುತಿಸಲಾಗಿದೆ..
ತಂಗಿ ಮೇಲಿನ ಕೋಪಕ್ಕೆ ಆಕೆಯ ಮಗನನ್ನು ಕೊಲೆ ಮಾಡಿ ಹೂತು ಹಾಕಿದ್ದಾಳೆ ಅನ್ನೋದು ಆರೋಪ. ಮೃತ ಮಗುವಿನ ಅಮ್ಮ ಅನಿತಾ ಹಾಗೂ ಆರೋಪಿ ದೊಡ್ಡಮ್ಮ ಅಂಬಿಕಾ ನಡುವಿನ ಸಂಬಂಧ ಸರಿ ಇರಲಿಲ್ಲ. ಇದೇ ಕಾರಣಕ್ಕೆ ಅನಿತಾಳ ಮಗನನ್ನು ಕೊಲೆ ಮಾಡಿದ್ದಾಳಂತೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ಅಂಬಿಕಾಳಿಗೆ ಅನೈತಿಕ ಸಂಬಂಧ ಇತ್ತು. ಇದನ್ನು ಅನಿತಾ ವಿರೋಧಿಸಿದ್ದಳು. ಇದೇ ಕಾರಣಕ್ಕೆ ಅನಿತಾ ಮೇಲಿನ ಸಿಟ್ಟಿಗೆ ಕೊಲೆ ಮಾಡಿದ್ದಾಳೆ ಎನ್ನಲಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ಆಗಮಿಸಿರುವ ಪೆರೆಸಂದ್ರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ತನಿಖೆ ಬಳಿಕ ಅಸಲಿ ಸತ್ಯ ತಿಳಿದು ಬರಲಿದೆ.
- Advertisement -