ತೊಕ್ಕೊಟ್ಟು : ಕುತ್ತಿಮೊಗರು ಜಾತ್ರೋತ್ಸವದ ಪ್ರಯುಕ್ತ ಟೀಮ್ ಅಗ್ನಿ ಅಂಬ್ಲಮೊಗರು ಇದರ ಪಂಚಮ ವರ್ಷದ ವಾರ್ಷಿಕೋತ್ಸವದ ಸಂಭ್ರಮ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟು, ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಧನಲಕ್ಷ್ಮೀ ಗಟ್ಟಿ, ಜನಪದ ಪರಿಷತ್ ನ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಕಲ್, ಯುವ ಉದ್ಯಮಿ ಪ್ರವೀಣ್ ಆಳ್ವ, ತುಳು ಚಿತ್ರ ನಿರ್ಮಾಪಕ ತಮ್ಮಣ್ಷ ಶೆಟ್ಟಿ ಭಾಗವಹಿಸಿದ್ದರು.
ನಿತಿನ್ ಕೊಟ್ಟಾರಿ, ಕಿರಣ್ ರೈ, ಕರುಣಾಕರ ಪೂಜಾರಿ, ರಂಜಿತ್ ಶೆಟ್ಟಿ , ನಿಖಿಲ್ ಕೊಟ್ಟಾರಿ, ಶರತ್ ಪೂಜಾರಿ ಅಂಬ್ಲಮೊಗರು, ಅಶ್ವಿತ್ ಪೂಜಾರಿ, ಐವನ್ ಪಿಂಟೋ, ಬಾಲಕೃಷ್ಣ ಶೆಟ್ಟಿ ಗುತ್ತಿನಮನೆ, ನಿತೇಶ್ ಅಂಬ್ಲಮೊಗರು, ಬೃಜೇಶ್ ನಾಯರ್ ಉಪಸ್ಥಿತರಿದ್ದರು.
ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ಧಾರ್ಮಿಕ ಸಭಾಕಾರ್ಯಕ್ರಮದ ಬಳಿಕ ಸಮಾಜ ರತ್ನ ಶ್ರೀ ಲೀಲಾಧರ್ ಶೆಟ್ಟಿ ಸಾರಥ್ಯದ ಕಾಪು ರಂಗತರಂಗ ಕಲಾವಿದರ ಬುಡೆದಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.