ಪುತ್ತೂರು: ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ಡಿ. 24 ರಂದು ನಡೆಯಲಿದ್ದು ಇದರ ಪ್ರಯುಕ್ತ ಆಮಂತ್ರಣ ಪತ್ರಿಕೆಯು ನ. 28 ರಂದು ಬಿಡುಗಡೆಗೊಳಿಸಿದರು. ಶಾಲಾ ಎಸ್ ಡಿ ಎಂಸಿ ಮಾಜಿ ಅಧ್ಯ ಕ್ಷ ಗೋಪಾಲಕೃಷ್ಣ ಭಟ್, ಗ್ರಾ.ಪಂ ಸದಸ್ಯ ತಾರಾನಾಥ ಮುಳಿಯಾಲ, ವಾರ್ಷಿಕೋತ್ಸ ವ ಸಮಿತಿ ಅಧ್ಯ ಕ್ಷ ಪ್ರವೀಣ್ ರೈ ನಡುಕೂಟೇಲು, ಉಪಾಧ್ಯಕ್ಷ ಶಶಿಧರ ನಾಯ್ಕ್, ಕಾರ್ಯದರ್ಶಿ ಪುಷ್ಪಾವತಿ ಗೌಡ, ಎಸ್ ಡಿ ಎಂಸಿ ಅಧ್ಯಕ್ಷ ಜಯರಾಮ ಗೌಡ ದೊಡ್ಡ ಮನೆ, ಮಾರ್ಗದರ್ಶಿ ಶಿಕ್ಷಕಿ ಸುಗುಣ, ಗ್ರಾ.ಪಂ ಮಾಜಿ ಸದಸ್ಯ ದಿವಾಕರ ಬಂಗೇರ, ಮುಖ್ಯ ಶಿಕ್ಷಕಿ ಸುಜಾತ, ಮಾಜಿ ಸೈನಿಕ ಕರುಣಾಕರ ಪೆಲತ್ತಡ್ಕ , ಎಸ್ ಡಿಎಂಸಿ ಸದಸ್ಯರು, ಪೋಷಕರು, ವಾರ್ಷಿಕೋತ್ಸವ ಸಮಿತಿ ಸದಸ್ಯ ರು ಹಾಗೂ ಊರವರು ಉಪಸ್ಥಿತರಿದ್ದರು.
ಡಿ. 24 ರಂದು ನಡೆಯುವ ವಾರ್ಷಿಕೋತ್ಸವದಲ್ಲಿ ಬೆಳಿಗ್ಗೆ ಧ್ವಜಾರೋಹಣ ನಡೆದು ಬಳಿಕ ಸಭಾಕಾರ್ಯಕ್ರಮ ನಡೆಯಲಿದೆ. ಪಾಲ್ತಾಡಿ ಮತ್ತು ಉಪ್ಪೊಳಿಗೆ ಅಂಗನವಾಡಿ ಕೇಂದ್ರ ಹಾಗೂ ಪಾಲ್ತಾಡಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ಸಂಜೆ ಯಕ್ಷ ಸಂಭ್ರಮದಲ್ಲಿ ರಂಗ ಚರ್ಕವರ್ತಿ ಸುಬ್ಬು ಸಂಟ್ಯಾರ್ ನಿರ್ದೇಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪೌರಾಣಿಕ ಯಕ್ಷಗಾನ ಬಯಲಾಟ “ಸುದರ್ಶನೋಪಖ್ಯಾನ” ನಡೆಯಲಿದೆ.
ರಾತ್ರಿ ಶಾರದಾ ಆರ್ಟ್ಸ್ ಕಲಾವಿದೆರ್ (ರಿ) ಮಂಜೇಶ್ವರ ಅಭಿನಯಿಸುವ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ನಿರ್ದೇಶಿಸಿ ಕಾಂತಾರ ಸಿನಿಮಾದಲ್ಲಿ ಅಮೋಘವಾಗಿ ನಟಿಸಿರುವ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ತುಳು ಸೌರಭ ಪ್ರಕಾಶ್ ಕೆ. ತೂಮಿನಾಡು ಅಭಿನಯದ “ನಿತ್ಯೆ ಬನ್ನಗ” ತುಳು ಹಾಸ್ಯಮಯ ನಾಟಕ ನಡೆಯಲಿದೆ.