- Advertisement -
- Advertisement -
ಪುತ್ತೂರು: ಡಿ.9ರಂದು ನೆಕ್ಕಿಲಾಡಿಯಲ್ಲಿ ಬೈಕ್ ಗೆ ಸ್ಕೂಟರ್ ಡಿಕ್ಕಿ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸುಪ್ರೀತ್ ಎಂಬವರು ಡಿ.13 ರಂದು ಮೃತಪಟ್ಟಿ ದ್ದಾರೆ.
ನೆಕ್ಕಿಲಾಡಿಯಲ್ಲಿ ಮಹಮ್ಮ ದ್ ಸಾದಿಕ್ ಎಂಬವರು ಉಪ್ಪಿನಂಗಡಿಯಿಂದ ಪೆರ್ನೆ ಕಡೆ ಚಲಾಯಿಸುತ್ತಿದ್ದ ಬೈಕ್ ನ ಹಿಂಬದಿಗೆ ಸುಪ್ರೀತ್ ಎಂಬವರು ಸಹಸವಾರ ಮಶ್ವಿತ್ ಎಂಬವರನ್ನು ಕುಳ್ಳಿರಿಸಿಕೊಂಡು ಚಲಾಯಿಸುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದ್ದು, ಅಪಘಾತದಿಂದ ಸುಪ್ರೀತ್ ಗಂಭೀರ ಗಾಯಗೊಂಡು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
- Advertisement -