- Advertisement -
- Advertisement -
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಆಯೋಜಿಸಿದ್ದ ಪುನೀತ್ ರಾಜಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಚಿತ್ರನಟ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಭಾಗವಹಿಸಿದರು.
ಶಿವರಾಜಕುಮಾರ್ ಅವರು ಅಪ್ಪು ಅನ್ನು ನೆನಪಿಸಿಕೊಂಡು ಭಾವುಕರಾದರು. “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ…ಚಂದ್ರ ಮೇಲೆ ಬಂದ ..”ಹಾಡಿನ ಕೆಲ ಸಾಲುಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಇಲಾಖೆ ವತಿಯಿಂದ ಶಿವರಾಜಕುಮಾರ್ ಮತ್ತು ಗೀತ ದಂಪತಿಯನ್ನು ಸನ್ಮಾನಿಸಲಾಯಿತು. ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸ್ವಾಗತಿಸಿದರು. ಡಿಸಿಪಿ ಹರಿರಾಂ ಶಂಕರ್, ಚಿತ್ರ ನಿರ್ಮಾಪಕ ರಾಜೇಶ್ ಭಟ್, ಮೇಘರಾಜ್, ರಾಜೇಂದ್ರಕುಮಾರ್ ಇದ್ದರು.
- Advertisement -