ವಿಟ್ಲ: ಉರಿಮಜಲು ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ. ಇದರ ಶತಾಮೃತ ವಾಣಿಜ್ಯ ಸಂಕೀರ್ಣದಲ್ಲಿ ನಾರ್ಟನ್ ಸೋಲಾರ್ ಕಂಪನಿಯವರು ಮತ್ತು ಸೋಲಾರ್ ಟೆಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಶಾಖೆ ಶುಭಾರಂಭಗೊಂಡಿತು.


ಈ ಶುಭಾರಂಭ ಕಾರ್ಯಕ್ರಮದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ನಿಯಮಿತ, ಇದರ ಅಧ್ಯಕ್ಷ ಸುಧಕರ್ ಶೆಟ್ಟಿ ಮತ್ತು ಉಪಾಧ್ಯಕ್ಷ ರಾಮ್ ಭಟ್, ಹಾಗೂ ಕಾರ್ಯನಿರ್ವಾಧಿಕಾರಿ ಈಶ್ವರ್ ನಾಯ್ಕ್ ಮತ್ತು ದಿಗ್ವಿಜಯ ಹರ್ಬಲ್ಸ್ ಮಾಲಕರಾದ ದಿನಕರ್ ಭಟ್ ಮಾವೆ, ಭಾರತ್ ಆಡಿಟೋರಿಯಂನ ಮಾಲಕ ಸಂಜೀವ ಪೂಜಾರಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸೋಲಾರ್ ಟೆಕ್ ಮತ್ತು ನಾರ್ಟನ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತಿಯಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುದಕರ್ ಶೆಟ್ಟಿ ಅವರು ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಸೇರಿದ ಎಲ್ಲಾ ಗ್ರಾಮದ ಸದಸ್ಯರಿಗೆ, ಮನೆಗೆ ಮತ್ತು ತೋಟದಲ್ಲಿ ಪಂಪಿನ ಸೌರ ಘಟಕ ನಿರ್ಮಾಣ ಮಾಡಲು ಸಾಲದ ಸೌಲಭ್ಯವನ್ನು ಸಂಸ್ಥೆ ಮೂಲಕ ನೀಡುತ್ತೆವೆ ಎಂದು ಭರವಸೆ ನೀಡಿದರು.

ಹೆಚ್ಚಿನ ಮಾಹಿತಿಗಾಗಿ
9740873244


