- Advertisement -
- Advertisement -
ವೀರಕಂಭ: ಸ್ವಾತಂತ್ರ್ಯ ದಿನಾಚರಣೆಯು ಭಾರತೀಯರ ಪಾಲಿಗೆ ಸಂಭ್ರಮದ ದಿನ ನಮ್ಮ ದೇಶದ ಘನತೆಯನ್ನು ಎತ್ತಿ ಸಾರುವ ದಿನವಾಗಿದೆ. ನಾವಿಂದು ಅನುಭವಿಸುವ ಸಂತೋಷಗಳ ಹಿಂದೆ ಹಲವಾರು ಜನರ ತ್ಯಾಗ ಬಲಿದಾನವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಶಾಲೆಯಲ್ಲಿ75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಯುತ ಸಂಜೀವ ಮೂಲ್ಯರವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ವಿಜಯ ಶೇಖರ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಕಂಬ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ರೇವತಿ ಹಾಗೂ ಯೋಜನೆಯ ಸದಸ್ಯರು ,ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ಭಾಗವಹಿಸಿ ದ್ದರು.ಸಹ ಶಿಕ್ಷಕಿ ಸಂಗೀತ ಶಮ೯ ಸ್ವಾಗತಿಸಿ ವಂದಿಸಿದರು.
- Advertisement -