Thursday, July 23, 2026
spot_imgspot_img
spot_imgspot_img

ವಿಟ್ಲ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಮನೆಗೆ ಹಿಂ.ಜಾ.ವೇ. ಮುಖಂಡರ ಭೇಟಿ; ಕೃತ್ಯಕ್ಕೆ ಕುಮ್ಮಕ್ಕುನೀಡಿದವರಿಗೆ ಶಿಕ್ಷೆಯಾಗಬೇಕು; ಸೋಮವಾರದ ಪ್ರತಿಭಟನೆಗೆ ಹಿಂ. ಜಾ. ವೇ. ಸಂಪೂರ್ಣ ಬೆಂಬಲ; ರಾಧಾಕೃಷ್ಣ ಅಡ್ಯಂತಾಯ

- Advertisement -
- Advertisement -

ವಿಟ್ಲ: ಕನ್ಯಾನದಲ್ಲಿ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯ ಮನೆಗೆ ಹಿಂದೂ ಜಾಗರಣ ವೇದಿಕೆ ಮುಖಂಡರು ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ಹೇಳಿ, ಅವರಿಗೆ ಧೈರ್ಯ ತುಂಬಿದರು.

ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು. ಇನ್ನು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರಿಗೂ ಶಿಕ್ಷೆಯಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖರಾಗಿರುವ ರಾಧಾಕೃಷ್ಣ ಅಡ್ಯಂತಾಯ ರವರು ಆಗ್ರಹಿಸಿದರು.

ಸೋಮವಾರದ ಪ್ರತಿಭಟನೆಗೆ ಹಿಂದೂ ಜಾಗರಣ ವೇದಿಕೆಯ ಸಂಪೂರ್ಣ ಬೆಂಬಲವಿದ್ದು, ಎಲ್ಲಾ ಕಾರ್ಯಕರ್ತರು ಭಾಗಿಯಾಗಲು ರಾಧಾಕೃಷ್ಣ ಅಡ್ಯಂತಾಯರವರು ಕರೆ ನೀಡಿದ್ದಾರೆ.

ಪ್ರಾಂತ ಪ್ರಮುಖರಾಗಿರುವ ರಾಧಾಕೃಷ್ಣ ಅಡ್ಯಂತಾಯ, ವಿಭಾಗ ಸಂಪರ್ಕ ಪ್ರಮುಖರಾಗಿರುವ ರತ್ನಾಕರ ಶೆಟ್ಟಿ, ಕಲ್ಲಡ್ಕ ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಜಿಲ್ಲಾ ಕಾರ್ಯದರ್ಶಿ ನರಸಿಂಹಶೆಟ್ಟಿ ಮಣಿ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ತಾಲೂಕ್ ಅಧ್ಯಕ್ಷರಾದ ಗಣೇಶ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಇರ, ಉಪಾಧ್ಯಕ್ಷರಾದ ರಾಜೇಶ್ ನಾಯಕ್ ಕರೋಪಾಡಿ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ವಿನೋದ್ ಶೆಟ್ಟಿ ಪಟ್ಲ, ಪಂಚಾಯತ್ ಸದಸ್ಯರಾದ ಅಶ್ವತ್ ಶೆಟ್ಟಿ ಪಟ್ಲ, ಕರೋಪಾಡಿ ಹಿಂದು ಜಾಗರಣ ವೇದಿಕೆ ಅಧ್ಯಕ್ಷರಾದ ರಮೇಶ್ ಲಕ್ಷ್ಮಣ್ ಕರೋಪಾಡಿ . ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ್ ಅವಿನಾಶ್ ಪುತ್ತೂರು, ಪುತ್ತೂರು ಪ್ರಧಾನ ಕಾರ್ಯದರ್ಶಿ ದಿನೇಶ್ ಪಂಜಿಗ, ಲಕ್ಷ್ಮಣ್ ಕರೋಪಾಡಿ, ಸ್ವಸ್ತಿಕ್ ಪುತ್ತೂರು, ಪ್ರಶಾಂತ್ ಮುಡಿಪು ಹರೀಶ್ ಮುಡಿಪು ಉಪಸ್ಥಿತರಿದ್ದರು.

- Advertisement -

Related news

error: Content is protected !!