- Advertisement -
- Advertisement -
ತೇಗದ ಮರವನ್ನು ಕಡಿದು ಸಂಗ್ರಹಿಸಿಟ್ಟ ಆರೋಪದಡಿ ಓರ್ವನನ್ನು ಸಂಪಾಜೆ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಸುಳ್ಯ ತಾಲೂಕು ಚೆಂಬು ಗ್ರಾಮದ ಊರುಬೈಲು ಧರ್ಮಪಾಲ ಎನ್ನಲಾಗಿದೆ . ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ಪಬ್ಬಿಪ್ಯಾಬ್ ಮೀಸಲು ಅರಣ್ಯದಿಂದ ತೇಗದ ಮರವನ್ನು ಕಡಿದು ಸಂಗ್ರಹಿಸಿಟ್ಟಿದ್ದಾರೆಂದು ಆರೋಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಸಿನ್ ಪಾಷಾ, ವಲಯಾರಣ್ಯಾಧಿಕಾರಿ ಮಧುಸೂದನ ಎಂ.ಕೆ.ರವರ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾಧಿಕಾರಿ ವಿಜೇಂದ್ರ ಕುಮಾರ್, ಅರಣ್ಯ ರಕ್ಷಕರಾದ ಜಯರಾಮ, ಮನೋಹರ, ವಾಹನ ಚಾಲಕ ಭರತ್ ಕೇನಾಜೆ ಕಾರ್ಯಾಚರಣೆಯಲ್ಲಿದ್ದು ಆರೋಪಿಗಳನ್ನು ಬಂಧಿಸಿ ತೇಗದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
- Advertisement -