ಬಾಗಲಕೋಟೆ: ಮಗಳು ಅನ್ಯ ಸಮುದಾಯದವನನ್ನು ಪ್ರೀತಿಸಿ ವಿವಾಹವಾದ ಯುವಕನಿಗೆ ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಟ ಗ್ರಾಮದಲ್ಲಿ ನಡೆದಿದೆ. ರೊಚ್ಚಿನಿಂದ ಮಗಳ ಗಂಡನನ್ನೇ ತಂದೆ ಕೊಂದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನಲ್ಲಿ ನಡೆದಿದೆ.
ಭುಜಬಲ ಕರ್ಜಗಿ (34) ಕೊಲೆಯಾದ ವ್ಯಕ್ತಿ. ತಮ್ಮನ ಗೌಡ ಕೊಲೆ ಮಾಡಿದಾತ. ತಮ್ಮನಗೌಡನ ಮಗಳು ಭಾಗ್ಯಶ್ರೀಯನ್ನು ಭುಜಬಲ ಮದುವೆಯಾಗಿದ್ದ. ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಭುಜಬಲ ಜೈನ ಸಮುದಾಯಕ್ಕೆ ಹಾಗೂ ಭಾಗ್ಯಶ್ರೀ ಕ್ಷತ್ರಿಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಂದು ವರ್ಷದ ಹಿಂದೆ ಪ್ರೀತಿಸಿ ಕುಟುಂಬದ ವಿರೋಧದ ನಡುವೆಯು ರಿಜಿಸ್ಟರ್ ವಿವಾಹವಾಗಿದ್ದರು. ನಂತರ ಊರಲ್ಲೇ ಬಂದು ವಾಸವಾಗಿದ್ದರು.
ಮಗಳು ಅನ್ಯಮತೀಯನನ್ನು ಮದುವೆಯಾದ ಸೇಡು ಇಟ್ಟುಕೊಂಡಿದ್ದ ತಂದೆ, ಅಳಿಯನ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ಕುರಿತು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.