Monday, May 13, 2024
spot_imgspot_img
spot_imgspot_img

ಆರ್‌ಸಿಬಿ ಹಾಗೂ ಕೊಹ್ಲಿಯನ್ನು ಗೇಲಿ ಮಾಡಿದ್ದಕ್ಕೆ ನಡೆಯಿತು ಸ್ನೇಹಿತನ ಘೋರ ಹತ್ಯೆ..!

- Advertisement -G L Acharya panikkar
- Advertisement -

ಆರ್‌ಸಿಬಿ ಹಾಗೂ ಕೊಹ್ಲಿಯನ್ನು ಗೇಲಿ ಮಾಡಿದ್ದಕ್ಕೆ ಸ್ನೇಹಿತನನ್ನೇ ಹತ್ಯೆಗೈದ ಘಟನೆ ನಡೆದಿದೆ. ಧರ್ಮರಾಜ್ (21) ಕೊಲೆ ಆರೋಪಿಯಾಗಿದ್ದು ವಿಘ್ನೇಶ್(24) ಕೊಲೆಯಾದ ವ್ಯಕ್ತಿ. ಈ ಘಟನೆ ತಮಿಳುನಾಡಿನ ಅರಿಯಲೂರಿನ ಪೊಯ್ಯೂರ್‌ನಲ್ಲಿ ನಡೆದಿದೆ.

ಪರಸ್ಪರ ಸ್ನೇಹಿತರಾಗಿದ್ದ ಧರ್ಮರಾಜ್ ಮತ್ತು ವಿಘ್ನೇಶ್ ಇಬ್ಬರು ಸೇರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್‍ಗೆ ಹೋಗಿದ್ದರು. ಈ ವೇಳೆ ಇಬ್ಬರು ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕ್ರಿಕೆಟ್ ಕುರಿತು ಚರ್ಚೆ ನಡೆದು ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನಲ್ಲಿ ಯಾವುದು ಉತ್ತಮ ಎಂಬುದರ ಕುರಿತು ಮಾತಿಗೆ ಮಾತು ಬೆಳೆದಿದೆ. ಈ ವೇಳೆ ವಿಘ್ನೇಶ್ ಆರ್‌ಸಿಬಿಯನ್ನು ಗೇಲಿ ಮಾಡಿ ಕೊಹ್ಲಿಯನ್ನು ಅಣಕಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಧರ್ಮರಾಜ್‌ ವಿಘ್ನೇಶ್‌ನನ್ನು ಹತ್ಯೆ ಮಾಡಿದ್ದಾನೆ.

ಘಟನೆಗೆ ಸಂಬಂಧಿಸಿ ನಿರ್ಜನ ಸ್ಥಳದಲ್ಲಿ ವಿಘ್ನೇಶ್ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಮೊಬೈಲ್ ದಾಖಲೆಯ ಆಧಾರದ ಮೇಳೆ ಧರ್ಮರಾಜ್‍ನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ನಡೆದ ಘಟನೆಯನ್ನು ಬಂಧಿತ ಆರೋಪಿ ವಿವರಿಸಿದ್ದಾನೆ. ಮೃತ ವಿಘ್ನೇಶ್ ಅವರು ಸಿಂಗಾಪುರಕ್ಕೆ ತೆರಳಲು ಮುಂದಾಗಿದ್ದು, ಐಟಿಐ ಮುಗಿಸಿದ್ದರು. ಈ ಘಟನೆ ನಡೆದಾಗ ಅವರು ಉದ್ಯೋಗ ವೀಸಾಕ್ಕಾಗಿ ಕಾಯುತ್ತಿದ್ದನು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!