ಬ್ರಹ್ಮಾವರ: ಸ್ನೇಹಿತನೋರ್ವನನ್ನು ಮದ್ಯ ಸೇವನೆಗೆಂದು ಬಾರ್ಗೆ ಕರೆಯಿಸಿ ಮದ್ಯ ಸೇವಿಸಿದ ಬಳಿಕ ಸ್ನೇಹಿತನ ಮೇಲೆಯೇ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ಇದನ್ನೂ ಓದಿ: ದ.ಕ ಜಿಲ್ಲೆ ಸೇರಿ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ನೈಟ್ ಕರ್ಫ್ಯೂ ಸಮಯ ಬದಲು
ಹಲ್ಲೆಗೆ ಒಳಗಾಗಿರುವ ವ್ಯಕ್ತಿ ರಮೇಶ್ (36) ಎನ್ನಲಾಗಿದೆ.
ರಮೇಶ್ ಸ್ನೇಹಿತನಾದ ಪ್ರಶಾಂತ್ ಮದ್ಯ ಸೇವನೆಗೆಂದು ರಮೇಶ್ ನನ್ನು ಬಾರ್ ಗೆ ಬರಲು ಹೇಳಿದ್ದಾನೆ. ಈ ವೇಳೆ ಪ್ರಶಾಂತ್ ಸ್ನೇಹಿತ ಶ್ರೀನಿವಾಸ ಸೇರಿದಂತೆ ಮೂವರು ಬ್ರಹ್ಮಾವರದ ಬಾರ್ವೊಂದಕ್ಕೆ ತೆರಳಿ ಮದ್ಯ ಸೇವನೆ ಮಾಡಿದ್ದಾರೆ.
ಇದನ್ನೂ ಓದಿ: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡಿದ ಮೋದಿ ಸರ್ಕಾರ
ಆದರೆ ಅಲ್ಲಿ ರಮೇಶ್ ಬಾರ್ ಬಿಲ್ ನೀಡಿಲ್ಲವೆಂಬ ಕಾರಣಕ್ಕೆ ಶ್ರೀನಿವಾಸ್ ಹಾಗೂ ಪ್ರಶಾಂತ್ ಸೇರಿಕೊಂಡು ಆತನ ಮೇಲೆ ಹಲ್ಲೆ ನಡೆಸಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಲ್ಲೆಗೆ ಒಳಗಾಗಿರುವ ರಮೇಶ್ ಬ್ರಹ್ಮಾವರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.