- Advertisement -
- Advertisement -
ಶಿರ್ವ: ಆರೋಗ್ಯ ತಪಾಸಣೆಗೆಂದು ಪತಿಯೊಂದಿಗೆ ಕ್ಲಿನಿಕ್ಗೆ ಹೋಗಿದ್ದ ಮಹಿಳೆಯ ಮೇಲೆ ವೈದ್ಯರೊಬ್ಬರು ಮಾನಭಂಗಕ್ಕೆ ಯತ್ನಿಸಿದ ಘಟನೆ ಉಡುಪಿಯ ಶಿರ್ವ ತಾಲೂಕಿನ ಶಂಕರಪುರದಲ್ಲಿ ನಡೆದಿದೆ.
ಆರೋಗ್ಯ ತಪಾಸಣೆಗಾಗಿ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಶಂಕರಪುರದಲ್ಲಿರುವ ಶ್ರೀನಿವಾಸ ಆರೋಗ್ಯಾಲಯ ಕ್ಲಿನಿಕ್ ಗೆ ಹೋಗಿದ್ದರು. ಈ ವೇಳೆ ಅಲ್ಲಿನ ವೈದ್ಯರಾದ ಡಾ. ಮುರಳೀಕೃಷ್ಣ ಭಟ್ ಅವರು ತಪಾಸಣೆ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ವೈದ್ಯರ ವಿರುದ್ಧ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -