Saturday, April 27, 2024
spot_imgspot_img
spot_imgspot_img

ಉಪೇಂದ್ರ ಸಿನಿಮಾ ಶೈಲಿಯಲ್ಲಿ ದೇವರಿಗೆ ಆವಾಜ್ ಹಾಕಿದ ಯುವಕ.!? ಮೆರವಣಿಗೆ ವೇಳೆ ಚಾಕು ಹಿಡಿದು ಯುವಕನ ಹುಚ್ಚಾಟ

- Advertisement -G L Acharya panikkar
- Advertisement -
astr

ಗಣೇಶ ಮೂರ್ತಿ ಮೆರವಣಿಗೆ ವೇಳೆ ನಟ ಉಪೇಂದ್ರ ಸಿನಿಮಾ ಶೈಲಿಯಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ಗಣೇಶನಿಗೆ ಆವಾಜ್ ಹಾಕಿದ ಘಟನೆ ಯಶವಂತಪುರ ದೇವರಾಯಪಾಳ್ಯದಲ್ಲಿ ನಡೆದಿದೆ.

ಯಶವಂತಪುರ ದೇವರಾಯಪಾಳ್ಯದಲ್ಲಿ ಅದ್ದೂರಿಯಾಗಿ ಗಣೇಶ ಮೂರ್ತಿ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಉಪೇಂದ್ರ ಸಿನಿಮಾ ಶೈಲಿಯಲ್ಲಿ ಚಾಕು ಹಿಡಿದುಕೊಂಡು ದೇವರಿಗೆ ಆವಾಜ್ ಹಾಕಿದ್ದಾನೆ. ಈ ವೇಳೆ ಗಲಾಟೆ ನಡೆದಿದ್ದು ,20ಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ. ಮೆರವಣಿಗೆ ವೇಳೆ ದುಷ್ಕೃತ್ಯ ಎಸಗಿದ ಯುವಕನನ್ನು ಸದ್ಯ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ತೇಜು ಎಂಬ ಯುವಕ ಮೆರವಣಿಗೆ ವೇಳೆ ಈ ದುಷ್ಕೃತ್ಯ ಎಸಗಿದ್ದಾನೆ. ಈತನ ಹುಚ್ಚಾಟಕ್ಕೆ ಎಲ್ಲರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಇತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!