Friday, March 29, 2024
spot_imgspot_img
spot_imgspot_img

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ ಕೊಲೆ ಯತ್ನ-ನಾಲ್ವರ ಬಂಧನ

- Advertisement -G L Acharya panikkar
- Advertisement -

ಮಂಗಳೂರು (ಅ17): ನಗರದ ಹೊರ ವಲಯದ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಉಳಾಯಿಬೆಟ್ಟು ನಿವಾಸಿಯಾಗಿರುವ ಯೂಸೂಫ್ ಆ.12 ರ ರಾತ್ರಿ ಕುಲಶೇಖರ ಬಳಿ ತನ್ನ ಕಾರಿನಲ್ಲಿ ಮನೆಗೆ ತೆರಳುತ್ತಿರುವ ವೇಳೆ ಬೈಕ್ ಡಿಕ್ಕಿ ಹೊಡೆಸಿ ಯೂಸೂಫ್ ಕಾರಿನಿಂದ ಇಳಿದ ಬಳಿಕ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಬಳಿಕ ಕಾರಿನ ಗಾಜು ಪುಡಿಗೈದು ಸ್ಥಳದಿಂದ ಪರಾರಿಯಾಗಿದ್ದರು.

ಈ ಪ್ರಕರಣ ಸಂಬಂಧ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯ ಎಸಗಿದ‌ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳಾದ ಪೆರ್ಮಂಕಿ ಉಳಾಯಿಬೆಟ್ಟಿನ‌ ನಿವಾಸಿ ಸಂದೇಶ್ ಪೂಜಾರಿ(26) , ಬಂಟ್ವಾಳದ ರಾಯಿ ನಿವಾಸಿ ದೇವದಾಸ್ ಶೆಟ್ಟಿ(26) , ಪಾಂಡವರಗುಡ್ಡೆ ನಿವಾಸಿ ಸುರಾಜ್(29) , ಫರಂಗಿಪೇಟೆಯ ಧನರಾಜ್(26) ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯೂಸುಫ್ ಹಿಂದೆ ಉಳಾಯಿಬೆಟ್ಟಿನಲ್ಲಿ ನಡೆದ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಅದಕ್ಕೆ ರಿವೆಂಜ್ ನೀಡಲು ಆರೋಪಿಗಳು ಕೊಲೆ ಮಾಡಲು ಯತ್ನಿಸಿದ್ದರು ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

- Advertisement -

Related news

error: Content is protected !!