Thursday, May 2, 2024
spot_imgspot_img
spot_imgspot_img

ಉಳ್ಳಾಲ: ಕುಟುಂಬದವರ ಎದುರಲ್ಲೇ ನೀರು ಪಾಲಾದ ವ್ಯಕ್ತಿ

- Advertisement -G L Acharya panikkar
- Advertisement -
vtv vitla

ಉಳ್ಳಾಲ: ಕುಟುಂಬದವರ ಜೊತೆಗೆ ಸೋಮೇಶ್ವರ ಬೀಚ್‌ಗೆ ಹೋದ ವ್ಯಕ್ತಿ ಕುಟುಂಬದವರ ಎದುರಲ್ಲೇ ನೀರು ಪಾಲಾದ ಇಂದು ಬೆಳಿಗ್ಗೆ ನಡೆದಿದೆ.

ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್(47) ಮೃತ ವ್ಯಕ್ತಿ .

ಮೃತ ಪ್ರಶಾಂತ್‌ ಮಂಗಳೂರಿನ ಎಸ್‌.ಡಿ.ಎಮ್ ಕಾಲೇಜಲ್ಲಿ ಬಸ್‌ ಚಾಲಕರಾಗಿದ್ದರು. ಪ್ರಶಾಂತ್ ಇಂದು ಬೆಳಗ್ಗೆ ಪುತ್ರನಾದ ಚಿರಾಯು ಬೇಕಲ್‌, ಸಹೋದರ ವರದರಾಜ್ ಬೇಕಲ್ ಅವರ ಮಗ ವಂದನ್ ಬೇಕಲ್‌, ಮತ್ತು ಇತರರೊಂದಿಗೆ ಸೋಮೇಶ್ವರ ಬೀಚ್ ಗೆ ವಿಹಾರಕ್ಕೆ ತೆರಳಿದ್ದರು. ಪ್ರತೀ ಆದಿತ್ಯವಾರವೂ ಪ್ರಶಾಂತ್ ಅವರು ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳುತ್ತಿದ್ದರು.

ಎಂದಿನಂತೆ ಇಂದು ಬೆಳಗ್ಗೆ ಪ್ರಶಾಂತ್ ಸಮುದ್ರದಲ್ಲಿ ನೀರಾಟವಾಡುತ್ತಿದ್ದಾಗ ನೀರುಪಾಲಾಗಿದ್ದಾರೆ.

ಪ್ರಶಾಂತ್‌ ಅವರ ಪುತ್ರ ಚಿರಾಯು ಈಜು ಪರಿಣತನಾಗಿದ್ದು ತಕ್ಷಣ ಹಗ್ಗದಿಂದ ತಂದೆಯನ್ನ ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ಹಾಕಿದ್ದು, ಅದಾಗಲೇ ಪ್ರಶಾಂತ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಮೃತ ಪ್ರಶಾಂತ್ ಅವರ ಏಕೈಕ ಪುತ್ರ ಚಿರಾಯು ಇಂಜಿನಿಯರಿಂಗ್‌ ವ್ಯಾಸಂಗ ನಡೆಸುತ್ತಿದ್ದಾನೆ. ಮೃತರು ತಾಯಿ, ಪತ್ನಿ, ಪುತ್ರ, ಇಬ್ಬರು ತಮ್ಮಂದಿರನ್ನ ಆಗಲಿದ್ದಾರೆ.

- Advertisement -

Related news

error: Content is protected !!