- Advertisement -
- Advertisement -
ಬೆಳ್ಳಂಬೆಳಗ್ಗೆಯೇ ಯಮಸ್ವರೂಪದಲ್ಲಿ ಬಂದ ಡೀಸಲ್ ಟ್ಯಾಂಕರ್ ಕುರಿಗಾಹಿ ಸೇರಿದಂತೆ 18 ಕುರಿಗಳನ್ನು ಬಲಿಪಡೆದುಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆಯ ಗಾರ್ಡನ್ ಬಳಿ ಈ ಘಟನೆ ಸಂಭವಿಸಿದೆ. ಕುರಿಗಾಹಿ ಯಲ್ಲಪ್ಪ ಬಸಪ್ಪ ಚಿಗರಿ(45) ಮೃತ ದುರ್ದೈವಿ. 18 ಕುರಿಗಳು ಸಹ ಸಾವನ್ನಪ್ಪಿದೆ.
ವಲಸೆ ಕುರಿಗಾಹಿಗಳು ಗಂಗಾವತಿಯಿಂದ ಹುಬ್ಬಳ್ಳಿ ಕಡೆ ಕುಷ್ಟಗಿ ಮೂಲಕ ಗಜೇಂದ್ರಗಡ ರಸ್ತೆಯಲ್ಲಿ ಹೊರಟಿದ್ದರು. ಡೀಸಲ್ ಟ್ಯಾಂಕರ್ ಚಾಲಕನ ನಿರ್ಲಕ್ಷ ಚಾಲನೆಯಿಂದ ಕುರಿಗಳ ಮೇಲೆ ಲಾರಿ ಹರಿದಿದ್ದು 18 ಕುರಿಗಳು ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದೆ.
ಫೋಕಸ್ ಲೈಟ್ ಬೆಳಕಿಗೆ ಕುರಿ ಮಂದೆ ಕಾಣಲಿಲ್ಲ..!
ಟ್ಯಾಂಕರ್ ಚಾಲಕ ಪೊಲೀಸರಿಗೆ ಶರಣಾಗಿದ್ದು, ಎದುರಿನ ವಾಹನ ಫೋಕಸ್ ಲೈಟ್ ಬೆಳಕಿಗೆ ಕುರಿ ಮಂದೆ ಕಾಣಲಿಲ್ಲ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ಮೌನೇಶ ರಾಠೋಡ್ ಭೇಟಿ ನೀಡಿ ಪರಿಶೀಲಿಸಿದ್ದಾರೆ ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
- Advertisement -