- Advertisement -
- Advertisement -
ಪುತ್ತೂರು : ದೇಶದ ಪ್ರಮುಖ ಮುಸ್ಲಿಂ ವಿಧ್ಯಾರ್ಥಿ ಸಂಘಟನೆಯಾದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ಸುವರ್ಣ ಮಹೋತ್ಸವದ ಘೋಷಣಾ ಸಮಾವೇಶ ಎನ್ಹಾನ್ಸ್ ಇಂಡಿಯಾ ಕಾನ್ಫರೆನ್ಸ್ ದೇಶದ 17 ಕೇಂದ್ರಗಳಲ್ಲಿ ನಾಳೆ (ಮೇ 8) ಏಕಕಾಲದಲ್ಲಿ ನಡೆಯಲಿದೆ.
ಈ ಪ್ರದೇಶದ ಕಾರ್ಯಕರ್ತರಿಗಾಗಿ ನಾಳೆ ಅಡ್ಯಾರ್ ಕಣ್ಣೂರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಘ ಕುಟುಂಬದ ಎಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಬೇಕು. ವಿಶೇಷವಾಗಿ ಸುನ್ನಿ ಯುವಜನ ಸಂಘದ ಜಿಲ್ಲೆ, ಸೆಂಟರ್, ಬ್ರಾಂಚ್ ವ್ಯಾಪ್ತಿಯ ಎಲ್ಲಾ ನಾಯಕರು, ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹೆಚ್ಚಿನ ಪರಿಶ್ರಮ, ಪ್ರಚಾರ ಪಡಿಸಿ ಭಾಗವಹಿಸಬೇಕೆಂದು ಎಸ್ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರುರವರು ಕರೆ ನೀಡಿದ್ದಾರೆ.
- Advertisement -