Sunday, May 19, 2024
spot_imgspot_img
spot_imgspot_img

ಕಂದಮ್ಮನಿಗೆ ಎದೆಹಾಲು ಉಣಿಸಲು ಸಾಧ್ಯವಗದೆ ಮನನೊಂದು ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

- Advertisement -G L Acharya panikkar
- Advertisement -

ತನ್ನ ಮಗುವಿಗೆ ಎದೆಹಾಲು ಉಣಿಸಲು ಕಡಿಮೆಯಾಗಿದೆ ಎಂದು ಮನನೊಂದು ತನ್ನ ಕಂದಮ್ಮನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯ ಶಾಂತಾ(28) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.

ಹೆರಿಗೆಯಗೆ ನಂತರ ಶಾಂತಾ ತವರು ಮನೆಯಲ್ಲಿದ್ದು, ಒಂದೂವರೆ ತಿಂಗಳ ತನ್ನ ಮಗುವಿಗೆ ಹಾಲು ಉಣಿಸಲು ಸಾಕಾಗುವಷ್ಟು ಎದೆ ಹಾಲು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಕುಪ್ಪಗಡ್ಡೆ ಸಮೀಪರ ತುಂಬೆಹೊಂಡಕ್ಕೆ ಶಾಂತಾ ಹಾಗೂ ಒಂದೂವರೆ ತಿಂಗಳ ಮಗು ಸಹಿತ ಹಾರಿ ಆತ್ಮಹತ್ಯೆ ಶರಣಾಗಿದ್ದಾಳೆ.

ಶಾಂತಾ ಹಾಗೂ ಮಗು ಕಾಣದೇ ಇದ್ದಾಗ ಕುಟುಂಬಸ್ಥರು ಹುಡುಕಾಡಿದ್ದು, ಗ್ರಾಮದ ಸಮೀಪದ ತುಂಬೆ ಹೊಂಡದಲ್ಲಿ ಒಂದೂವರೆ ತಿಂಗಳ ಪುಟ್ಟ ಕಂದಮ್ಮ ಮಂಗಳಗೌರಿಯ ಮೃತ ದೇಹ ಕಂಡು ಬಂದಿದ್ದು ಕೂಡಲೇ ಗ್ರಾಮಸ್ಥರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂಧಿಗಳ ಯಶಸ್ವಿ ಕಾರ್ಯಚರಣೆಯಿಂದ ತಾಯಿ, ಮಗುವಿನ ಶವವನ್ನು ಹೊರತೆಗೆಯಲಾಗಿದೆ.

ಸ್ಥಳಕ್ಕಾಗಮಿಸಿದ ಆನವಟ್ಟಿ ಪೊಲೀಸ್ ಠಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!