- Advertisement -
- Advertisement -
ಕಾಶ್ಮೀರ: ಕಣಿವೆ ರಾಜ್ಯಗಳಾದ ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ.. ಈ ಬಾರಿ ಉಗ್ರರು ದಾರಿಪಕ್ಕದಲ್ಲಿ ಗೋಲ್ಗಪ್ಪ ಮಾರುವ ವ್ಯಾಪಾರಿಯನ್ನ ಹತ್ಯೆಗೈದಿದ್ದಾರೆ. ಸಾವನ್ನಪ್ಪಿದ ವ್ಯಾಪಾರಿಯನ್ನು ಅರ್ವಿಂದ್ ಕುಮಾರ್ ಎಂದು ಗುರುತಿಸಲಾಗಿದೆ.
ಜಮ್ಮು ಕಾಶ್ಮೀರದ ಶ್ರೀನಗರ ಈದ್ಗಾ ಏರಿಯಾ ಬಳಿ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಶ್ರೀನಗರದ ಲಾಲ್ಬಜಾರ್ ಏರಿಯಾದಲ್ಲಿ ಬಿರೇಂದರ್ ಪಾಸ್ವಾನ್ ಎಂಬುವರನ್ನು ಉಗ್ರರು ಹತ್ಯೆಗೈದಿದ್ದಾರೆ. ಸದ್ಯ ಈದ್ಗಾ ಏರಿಯಾ ಬಳಿ ನಡೆದ ದಾಳಿಯ ಹೊಣೆಯನ್ನ ಐಎಸ್ಐಎಸ್ ಹೊತ್ತುಕೊಂಡಿದೆ.
- Advertisement -