Monday, April 29, 2024
spot_imgspot_img
spot_imgspot_img

ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂತು ಪ್ರೇಯಸಿಯ ಕರೆ; ಆಗ ತಾನೇ ಮದುವೆಯಾದ ಯುವಕ ಎಸ್ಕೇಪ್‌..!!

- Advertisement -G L Acharya panikkar
- Advertisement -

ಬೆಂಗಳೂರು: ಮಹದೇವಪುರ ಬಳಿ ವಾಹನಗಳ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಕಾರಿನಲ್ಲಿ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

‘ಫೆ.15ರಂದು ಮದುವೆಯಾಗಿದ್ದ ಯುವಕ ಯುವತಿ, ಪ್ರಾರ್ಥನಾ ಮಂದಿರಕ್ಕೆ ಹೋಗಿ ವಾಪಸ್ಸು ಮನೆಗೆ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಕಾರಿನಲ್ಲಿ ಪತ್ನಿ ಬಿಟ್ಟು ಪತಿ ಪರಾರಿಯಾಗಿದ್ದಾರೆ. ಈ ಸಂಬಂಧ ಪತ್ನಿ ಹಾಗೂ ಅವರ ಮನೆಯವರು ಮಾರ್ಚ್ 5ರಂದು ದೂರು ನೀಡಿದ್ದಾರೆ. ಅದನ್ನು ಆಧಾರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗೋವಾದಲ್ಲಿ ಕೆಲ ವರ್ಷ ವಾಸವಿದ್ದ ಯುವಕ, ಅಲ್ಲಿಯೇ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಈ ಸಂಗತಿ ಅವರ ಮನೆಯವರಿಗೆ ಗೊತ್ತಿರಲಿಲ್ಲ. ಯುವಕನನ್ನು ಬೆಂಗಳೂರಿಗೆ ಕರೆಸಿದ್ದ ಕುಟುಂಬಸ್ಥರು, ಪರಿಚಯಸ್ಥ ಯುವತಿ ಜೊತೆ ಮದುವೆ ಮಾಡಿಸಿದ್ದರು.

‘ಇದರ ನಡುವೆಯೇ ಗೋವಾದ ಯುವತಿ, ಯುವಕನ ಮೊಬೈಲ್‌ಗೆ ಕರೆ ಮಾಡಲಾರಂಭಿಸಿದ್ದರು. ಫೆ. 15ರಂದು ಕಾರಿನಲ್ಲಿ ಇರುವಾಗಲೇ ಯುವತಿ ಕರೆ ಬಂದಿತ್ತು. ಹಳೇ ಪ್ರೀತಿ ವಿಷಯದ ಬಗ್ಗೆ ಪತ್ನಿಗೂ ಅನುಮಾನ ಬಂದಿತ್ತು. ಈ ಬಗ್ಗೆ ಪತ್ನಿ, ಪ್ರಶ್ನಿಸಲಾರಂಭಿಸಿದ್ದ ಕಾರಣಕ್ಕೆ ಯುವಕ, ಕಾರಿನಿಂದ ಇಳಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಪತ್ನಿ ಕೆಲ ದೂರ ಹಿಂಬಾಲಿಸಿದರೂ ಸುಳಿವು ಸಿಕ್ಕಿಲ್ಲ’ ಎಂದರು.

- Advertisement -

Related news

error: Content is protected !!