- Advertisement -
- Advertisement -
ಕಾರ್ಕಳ: ಇಲ್ಲಿನ ಅನಂತಶಯನ ನಾಗರಬಾವಿ ಕೆರೆಗೆ ಆಕಸ್ಮಿಕವಾಗಿ ಮಹಿಳೆಯೋರ್ವರು ಕಾಲು ಜಾರಿಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವ ಘಟನೆ ನ. ೨೩ ರಂದು ಸಂಭವಿಸಿದೆ. ಮೃತರನ್ನು ದಾನಶಾಲೆ ನಿವಾಸಿ ಗೌರಮ್ಮ (65) ಎನ್ನಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಗೌರಮ್ಮ ಅವರ ಗಂಡ ಹೃದಯಾಘಾತದಿಂದ ನಿಧನರಾಗಿದ್ದರು. ಬುಧವಾರ ಬೆಳಿಗ್ಗೆ ವಾಕಿಂಗ್ ತೆರೆಳುವ ಸಂದರ್ಭ ಈ ಘಟನೆ ಸಂಭವಿಸಿದ್ದು, ಕೂಡಲೇ ಸ್ಥಳೀಯರು ಅವರನ್ನು ಕೆರೆಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
- Advertisement -