Thursday, May 2, 2024
spot_imgspot_img
spot_imgspot_img

ಕಾರ್ಕಳ: ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ..! ಕಾರಣವೇನು ಗೊತ್ತಾ..?

- Advertisement -G L Acharya panikkar
- Advertisement -

ಕಾರ್ಕಳ: ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಕಡಿದು ಹಲ್ಲೆಗೈದ ಘಟನೆ ಕುಕ್ಕುಂದೂರು ಗ್ರಾಮದ ನಕ್ರೆಯಲ್ಲಿ ನಡೆದಿದೆ. ಶೇಖರ ನಾಯ್ಕ್ ಹಲ್ಲೆಗೊಳಗಾದವರು. ಜಗದೀಶ ಆಚಾರ್ಯ ಹಲ್ಲೆಗೈದ ವ್ಯಕ್ತಿ.

ಶೇಖರ ನಾಯ್ಕ್ ಪಕ್ಕದ ಮನೆಯ ಶ್ರೀನಿವಾಸ ಆಚಾರ್ಯ ಎಂಬುವವರ ಜತೆ ಮಾತನಾಡುತ್ತಿದ್ದಾಗ ಶ್ರೀನಿವಾಸ ಆಚಾರ್ಯರವರ ಮನೆಯಲ್ಲಿದ್ದ ಅವರ ಹೆಂಡತಿಯ ತಮ್ಮ ಜಗದೀಶ ಆಚಾರ್ಯ ಎಂಬಾತ ಶೇಖರ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದಾನೆ.

ಶೇಖರ್ ನಾಯ್ಕ್ ಮತ್ತು ಶ್ರೀನಿವಾಸ ಆಚಾರ್ಯ ಸ್ನೇಹಿತರಾಗಿದ್ದು, ಶೇಖರ್ ನಾಯ್ಕ್ ಶ್ರೀನಿವಾಸ ಆಚಾರ್ಯರವರ ಮನೆಗೆ ಹೋಗಿ ಅಂಗಳದಲ್ಲಿ ನಿಂತುಕೊಂಡು ಮಾತನಾಡುತ್ತಿದ್ದಾಗ ಅವರ ಮನೆಯಲ್ಲಿದ್ದ ಜಗದೀಶ ಆಚಾರ್ಯ ಇವರು ತನ್ನದೇ ವಿಚಾರ ಮಾತನಾಡುತ್ತಿದ್ದಾರೆ ಎಂದು ಕೋಪಗೊಂಡು ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಶೇಖರ್ ನಾಯ್ಕ್ ಕೈಗೆ ಕಡಿದಿದ್ದಾನೆ.

ತೀವ್ರ ಗಾಯಗೊಂಡ ಶೇಖರ ನಾಯ್ಕ್ ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!