Monday, April 29, 2024
spot_imgspot_img
spot_imgspot_img

ಕಾರ್ಕಳ: ತೋಟದ ಕೆಲಸಕ್ಕೆ ಬಂದ ಕೆಲಸಗಾರನಿಂದಲೇ ಮನೆಗೆ ಕನ್ನ!

- Advertisement -G L Acharya panikkar
- Advertisement -

ಕಾರ್ಕಳ: ತೋಟದ ಕೆಲಸಕ್ಕೆ ಬಂದ ಕೆಲಸಗಾರನಿಂದಲೇ ಮನೆಯೊಡತಿಯ ಚಿನ್ನದ ಉಂಗುರ ಕಳವಾದ ಘಟನೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕಿನ ಜಯಪ್ರಕಾಶ್ ಎಂದು ತಿಳಿದುಬಂದಿದೆ.

ಇಲ್ಲಿನ ಗುಂಡ್ಯಡ್ಕದಲ್ಲಿ ವಾಸವಿರುವ ದೇಜು ಶೆಟ್ಟಿ ರವರ ಮನೆಗೆ ತೋಟದ ಕೆಲಸಕ್ಕೆ ಬಂದ ಜಯಪ್ರಕಾಶ್ ಮನೆಯ ಒಡತಿ ಸರಳ ಶೆಟ್ಟಿ ರವರು ಸ್ನಾನಕ್ಕೆಂದು ಹೋದಾಗ ಅವರ ಬೆಡ್ ರೂಂನಲ್ಲಿದ್ದ ಚಿನ್ನದ ಉಂಗುರವನ್ನು ಕಳವು ಮಾಡಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆರೋಪಿಯು ಉಂಗುರವನ್ನು ವೇಣೂರಿನ ಸೊಸೈಟಿಯೊಂದರಲ್ಲಿ ಅಡವಿಟ್ಟು ರೂ.6000 ವನ್ನು ಸಾಲವಾಗಿ ಪಡೆದು ಮನೆಯವರಿಗೆ ತನ್ನ ಮೇಲೆ ಸಂಶಯ ಬರಬಾರದೆಂದು ಮನೆಯವರು ಚಿನ್ನದ ಉಂಗುರವನ್ನು ಹುಡುಕಾಡುವ ಸಮಯ ಅರೋಪಿಯೂ ಮನೆಯವರೊಂದಿಗೆ ಸೇರಿ ಹುಡುಕಾಡುವಂತೆ ನಟಿಸಿ ಅವರ ಮನೆಯಲ್ಲಿಯೇ ಇದ್ದನು.

ಕೆಲ ದಿನಗಳ ಬಳಿಕ ಆರೋಪಿ ಕೆಲಸಕ್ಕೆ ಬಾರದಿರುವುದು ಕಂಡು ಅತನೇ ಚಿನ್ನದ ಉಂಗುರವನ್ನು ಕಳವು ಮಾಡಿರಬಹುದೆಂದು ಆತನ ಮೇಲೆ ಮನೆಯವರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!