Thursday, May 2, 2024
spot_imgspot_img
spot_imgspot_img

ಕಾರ್ಕಳ: ಹಿಂದೂ ಯುವತಿಯರ ಮತಾಂತರ..! ಇಬ್ಬರು ಮುಸ್ಲಿಂ ಯುವಕರ ಟಾರ್ಗೆಟ್ ಏನು? – Instagramನಲ್ಲಿ ಕರ್ಮಕಾಂಡ ಬೆಳಕಿಗೆ; ಆರೋಪವೇನು?

- Advertisement -G L Acharya panikkar
- Advertisement -

ಕಾರ್ಕಳ: ದಿನದಿಂದ ದಿನಕ್ಕೆ ಲವ್ ಜಿಹಾದ್‌ಗೆ ಬಲಿಯಾಗುತ್ತಿರುವ ಸಂಖ್ಯೆ ಏರಿಕೆಯಾಗುತ್ತಿದೆ. ಈ ನಡುವೆ ಫಾರುಕ್ ಮತ್ತು ಶಾರುಕ್‌ ಎಂಬ ಯುವಕರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಹಿಂದೂ ಧರ್ಮ ಎಂಬ Instagram ಖಾತೆಯಲ್ಲಿ ಇಬ್ಬರ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾರೆ.

Instagramನಲ್ಲಿ ಈ ರೀತಿ ಆರೋಪವಿದೆ…!
ಕಾರ್ಕಳದಲ್ಲಿರುವ ಒಂದು ಜಿಮ್ ನಲ್ಲಿ ಬರುವ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಹಿಂದೂ ಹುಡುಗಿಯರ ಬಾಳಿನಲ್ಲಿ ಆಟವಾಡುತ್ತಿದ್ದಾನೆ. ಜಿಮ್ ಗೆ ಬರುವ ಹುಡುಗಿಯರ ಮಾಹಿತಿ ತೆಗೆದು, ನಂತರ ಆ ಹುಡುಗಿಯರನ್ನು ಪುಸಲಾಯಿಸಿ ಅವರ ಜೊತೆ ಸುತ್ತುತ್ತಿದ್ದಾನೆ. ಕಾರ್ಕಳದ ಒಂದು ರೆಸಾರ್ಟ್ ನಲ್ಲಿ ರೂಮ್ ಮಾಡಿ ಹಿಂದೂ ಹುಡುಗಿಯ ಜೊತೆ ಸ್ಟೇ ಆಗುತ್ತಿದ್ದ, ಆದರೆ ಇತ್ತೀಚೆಗೆ ಅದೇ ಹುಡುಗಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂಬ ಮಾಹಿತಿ ಕೂಡ ಇದೆ. ಒಂದು ಹಿಂದೂ ಹುಡುಗಿಯನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಆರೋಪ ಕೂಡ ಈತನ ಮೇಲೆ ಇದೆ…

ಇದೇ ಜಿಮ್ ಗೆ ಬರುವ ಒಬ್ಬ ವಿವಾಹಿತ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ.. ಈ ವಿಷಯ ಆ ಮಹಿಳೆಯ ಗಂಡನಿಗೆ ತಿಳಿದು ಕೋರ್ಟ್ ನಲ್ಲಿ ವಿಚ್ಛೇದನದವರೆಗೆ ತಲುಪಿದೆ. ಈಗ ಪ್ರಸ್ತುತವಾಗಿ ಜಿಮ್ ಗೆ ಬರುವ ಹಲವು ಹಿಂದೂ ಹುಡುಗಿಯರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಕೂಡ ಮಾಹಿತಿ ಇದೆ. ಯಾರು ಏನೇ ಹೇಳಿದರೂ ಹಿಂದೂ ಮುಖಂಡರು ನಮ್ಮ ಪರಿಚಯಸ್ಥರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ.

https://www.instagram.com/p/CrYoPGDoqeV/?utm_source=ig_web_button_share_sheet

ಇದಕ್ಕೆ ಪೂರಕವಾಗಿ ನಿಟ್ಟೆ ಪರಿಸರದ ಕೆಲವು ಹಿಂದುಗಳ ಜೊತೆ ಉತ್ತಮ ರೀತಿಯಲ್ಲಿ ಮಾತನಾಡಿಕೊಂಡು, “ಹಿಂದುಗಳ ಬೆಂಬಲ ಕೂಡ ಪಡೆಯುತ್ತಿದ್ದಾನೆ… ಸೂಡ ದೇವಸ್ಥಾನದ ಜಾತ್ರಾ ಸಂಧರ್ಭ ಹಿಂದೂ ಬಾಂಧವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ನಿರ್ಧರಿಸಿದಾಗ, ಹಿಂದೂ ಮುಖಂಡರಿಗೆ ಕರೆ ಮಾಡಿ ಮುಸ್ಲಿಂರಿಗೆ ಕೂಡ ಅಂಗಡಿ ನಡೆಸಲು ಅವಕಾಶ ನೀಡಬೇಕು ಎಂದು ಬೆದರಿಕೆ ಒಡ್ಡಿದ್ದ, ಹಾಗೆ ಫಾರೂಕ್ ನ ಬೆಂಬಲದಿಂದ ಈತನ ಕ್ರಷರ್ ನಲ್ಲಿ ರೈಟರ್ ಆಗಿರುವ ಶಾರೂಕ್ ಕೂಡ ಹಿಂದೂ ಹುಡುಗಿಯರ ಮತಾಂತರದಲ್ಲಿ ತೊಡಗಿದ್ದಾನೆ.

ಮೂಲತಃ ಬೆಳ್ತಂಗಡಿ ನಿವಾಸಿ ಆಗಿರುವ ಈತ, ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಒಂದು ಮಸೀದಿಯ ಮುಕ್ರಿಯ ಮಗ ಶಾರುಕ್ ಎಂಬಾತ ಈ ಹಿಂದೆ ಕಾರ್ಕಳದ ಸುಭಾಶ್ ನಗರದ ಹಿಂದೂ ಯುವತಿಯನ್ನು 8 ವರ್ಷಗಳ ಹಿಂದೆ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದ್ದ… ಮತ್ತು ಇತ್ತೀಚೆಗೆ 2 ವರ್ಷಗಳ ಹಿಂದೆ ಹಾಸನದ ಮೂಲದ ಹಿಂದೂ ಯುವತಿಯನ್ನು ಮರಳು ಮಾಡಿ ಮದುವೆಯಾಗಿದ್ದಾನೆ, ಹಾಗೆ ಅವಳನ್ನು ಕೂಡ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ… ಈ ಎರಡನೇ ಮದುವೆ ವಿಚಾರ ಇತ್ತೀಚೆಗೆ ಮೊದಲನೇ ಹೆಂಡತಿಗೆ ತಿಳಿದು ಗಲಾಟೆ ನಡೆದಿದೆ… ಆದರೆ, ಶಾರೂಕ್ ಇಬ್ಬರನ್ನೂ ಹೇಗೋ ಸಮಾಧಾನಿಸಿ ಮರಳು ಮಾಡಿದ್ದಾನೆ… ಇಂತಹ ಮದುವೆಗಳಿಗೆ ಸಾಥ್ ನೀಡುವುದೇ ಫಾರೂಕ್…

ಹೊರಗಡೆ ಪ್ರಪಂಚಕ್ಕೆ ಯಾವುದೇ ಕೋಮು ಮನೋಭಾವನೆ ಇಲ್ಲದ ರೀತಿ ನಾಟಕವಾಡಿಕೊಂಡು ಮೌನವಾಗಿ, ತನ್ನ ನೀಚ ಬುದ್ದಿಯನ್ನು ತೋರಿಸುತಿದ್ದಾನೆ. ಈ ಕೂಡಲೇ ಕಾರ್ಕಳದ ಹಿಂದೂ ಮುಖಂಡರು ಈ ಕೋಮು ಮನಸ್ಥಿತಿಯ ಫಾರೂಕ್ ಮತ್ತು ಶಾರೂಕ್ ಇಬ್ಬರನ್ನೂ ವಿಚಾರಿಸಿ ಹೆಡೆಮುರಿಕಟ್ಟ ಬೇಕಾಗಿದೆ… ಇಲ್ಲವಾದಲ್ಲಿ ಈ ಪಾಪಿಗಳು ಇನ್ನೂ ಹಲವು ನಮ್ಮ ಹಿಂದೂ ಹುಡುಗಿಯರ ಬಾಳು ಹಾಳುಮಾಡುವುದರಲ್ಲಿ ಸಂದೇಹವಿಲ್ಲ… ಹೀಗೆ ಈ ಎರಡು ತಲೆಯ ಹಾವಿನ ಬಗ್ಗೆ ಯಾರೂ ಧ್ವನಿ ಎತ್ತದೇ ಇದ್ದಲ್ಲಿ ಮುಂದೆ ನಿಟ್ಟೆ ಗ್ರಾಮ ಮತಾಂತರದ ತಂಗುದಾಣ ಆಗಲುಬಹುದು” ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.

- Advertisement -

Related news

error: Content is protected !!