Sunday, May 5, 2024
spot_imgspot_img
spot_imgspot_img

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ಸಿನಡಿಗೆ ಬಿದ್ದು ದ್ವಿಚಕ್ರ ಸವಾರ ಮೃತ್ಯು

- Advertisement -G L Acharya panikkar
- Advertisement -

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ಸಿನ ಹಿಂಬದಿಯ ಚಕ್ರಕ್ಕೆ ಯುವ ಸ್ಕೂಟರ್ ಸವಾರನೊಬ್ಬ ಸಿಲುಕಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಕಾಸರಗೋಡಿನ ಹಳೆ ಬಸ್ ನಿಲ್ದಾಣದ ಬದ್ರಿಯಾ ಹೋಟೆಲ್ ಬಳಿ ಏಕಮುಖ ಸಂಚಾರದ ರಸ್ತೆಯಲ್ಲಿ ನಡೆದಿದೆ.

ಮೊಗ್ರಾಲ್ ಪುತ್ತೂರಿನ ಅಬ್ದುಲ್ ಖಾದರ್ ಮತ್ತು ಫೌಜಿಯಾ ದಂಪತಿಯ ಪುತ್ರ ಫಾಝಿಲ್ ತಬ್ಶೀರ್ (23) ಮೃತಪಟ್ಟ ಯುವಕ. ಇವರು ಕಾಸರಗೋಡು ಹಳೆ ಬಸ್ ನಿಲ್ದಾಣದಲ್ಲಿ ಫಾಝಿಲ್ ಬಟ್ಟೆ ಸಗಟು ವ್ಯಾಪಾರಿ.

ಅಪಘಾತದಲ್ಲಿ ಗಾಯಗೊಂಡ ತಬ್ಶೀರ್ ಅನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ಕಾಸರಗೋಡು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಕೆಎಸ್‌ಆರ್‌ಟಿಸಿ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!