Tuesday, May 7, 2024
spot_imgspot_img
spot_imgspot_img

ಬದಿಯಡ್ಕ: CPIM ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!

- Advertisement -G L Acharya panikkar
- Advertisement -

ಬದಿಯಡ್ಕ: ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಮಣಿಯಂಪಾರೆಯಲ್ಲಿ CPIM ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಆಕ್ರಮಣಗೈದ ಘಟನೆ ನಡೆದಿದೆ. ಇದರಿಂದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯಗಳಾಗಿದೆ.

ಎಣ್ಮಕಜೆ ಪಂಚಾಯತ್‌ನ ಮಣಿಯಂಪಾರೆಯಲ್ಲಿ ನಿನ್ನೆ ರಾತ್ರಿ ವಸಂತ, ರಾಜು, ಬಾಲು, ಮನೋಜ್ ಸೇರಿದಂತೆ 6 ಮಂದಿ ಸಿಪಿಐಎಂ ಕಾರ್ಯಕರ್ತರು ಮಾರಕಾಸ್ತ್ರಗಳನ್ನು ಬಿಜೆಪಿ ಕಾರ್ಯಕರ್ತರನ್ನು ಆಕ್ರಮಿಸಿ ಗಾಯಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಣಿಯಂಪಾರೆ ಜಯಂತ ನಾಯ್ಕರ ಮಗ ಸೂರ್ಯೋದಯ (19 ವಯಸ್ಸು), ಸಂಟನಡ್ಕ ಐತಪ್ಪ ನಾಯ್ಕರ ಮಗ ರೂಪೇಶ್ ( 26 ವಯಸ್ಸು) ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.

- Advertisement -

Related news

error: Content is protected !!