Tuesday, May 7, 2024
spot_imgspot_img
spot_imgspot_img

ಕಾಸರಗೋಡು: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪರಾರಿ; ಮೂವರು ಪೊಲೀಸರು ಸಸ್ಪೆಂಡ್

- Advertisement -G L Acharya panikkar
- Advertisement -

ಕಾಸರಗೋಡು: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪರಾರಿಯಾದ ಘಟನೆಗೆ ಸಂಬಂಧಪಟ್ಟಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಕಣ್ಣೂರು ಸಶಸ್ತ್ರ ಮೀಸಲು ಪಡೆಯ ಎ ಎಸ್ ಐ ಸಜೀವನ್ , ಜಶೀರ್ ಮತ್ತು ಅರುಣ್ ರನ್ನು ಅಮಾನತುಗೊಳಿಸಿ ಡಿ ಐ ಜಿ ರಾಹುಲ್ ಆರ್ ನಾಯರ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪದ ಹಿನ್ನಲೆಯಲ್ಲಿಕ್ರಮ ತೆಗೆದುಕೊಳ್ಳಲಾಗಿದೆ . ಸೋಮವಾರ ಬೆಳಿಗ್ಗೆ ವಿದ್ಯಾನಗರ ಬಿ . ಸಿ ರೋಡ್ ನಲ್ಲಿ ಘಟನೆ ನಡೆದಿತ್ತು.

vtv vitla
vtv vitla

ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ದ್ದ ಆಲಂಪಾಡಿಯ ಅಮೀರಾಲಿ ( 23) ಎಂಬ ಆರೋಪಿಯನ್ನು ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರುತ್ತಿದ್ದಾಗಪೊಲೀಸರ ಗಮನ ಬೇರೆಡೆ ಸೆಳೆದು ಪರಾರಿಯಾಗಿದ್ದನು. ಈತನಿಗಾಗಿ ಶೋಧ ಮುಂದುವರಿಯುತ್ತಿದ್ದು , ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

- Advertisement -

Related news

error: Content is protected !!