- Advertisement -
- Advertisement -
ಕುಂದಾಪುರ: ಹೊಸ ವರ್ಷದ ಪಾರ್ಟಿ ನಡೆಸಲು ಗಾಂಜಾ ತರುತ್ತಿದ್ದ ಓರ್ವನನ್ನು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.
ಬಂಧಿತ ಆರೋಪಿ ಕುಂದಾಪುರ ವಿಠಲವಾಡಿ ಮೂಲದ ವಿಶ್ವಪ್ರಸನ್ನ ಗೋಡೆ (26) ಎನ್ನಲಾಗಿದೆ. ಈತನಿಂದ 1 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಹೊಸ ವರ್ಷದ ಪಾರ್ಟಿಗೆ ಮೋಜುಮಸ್ತಿ ಮಾಡುವ ಸಲುವಾಗಿ ಹೈದರಾಬಾದ್ನಿಂದ ಕುಂದಾಪುರಕ್ಕೆ ಬಸ್ ಮೂಲಕವಾಗಿ ಗಾಂಜಾ ತರುತ್ತಿದ್ದ ಬಗ್ಗೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು ಎನ್ನಲಾಗಿದೆ.
ಡಿ.24 ತಡರಾತ್ರಿ ಬಸ್ರೂರು ಮೂರುಕೈ ಸಮೀಪ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ವಿಶ್ವಪ್ರಸನ್ನನನ್ನು ವಶಕ್ಕೆ ಪಡೆದು ಆತನಿಂದ ಮಾರಾಟಕ್ಕಾಗಿ ತಂದಿದ್ದ 1 ಕಿಲೋ ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
- Advertisement -