- Advertisement -
- Advertisement -
ಕುಂದಾಪುರ: ಚಿನ್ನಾಭರಣ ಹಾಗೂ ನಗದು ಕಳ್ಳತನವಾದ ಘಟನೆ ಕಮಲಶಿಲೆ ಗ್ರಾಮದ ರಾಘವೇಂದ್ರ ಯಡಿಯಾಳ(41) ಎಂಬವರ ಮನೆಯಲ್ಲಿ ನಡೆದಿದೆ.
1,30,000 ಮೌಲ್ಯದ ಎರಡು ಚಿನ್ನದ ಬಳೆಗಳು, 1,50,000 ಮೌಲ್ಯದ ಚಿನ್ನದ ಸರ, 20,000 ಮೌಲ್ಯದ ಚಿನ್ನದ ಉಂಗುರ ಮತ್ತು 5,000 ರೂ.ನಗದು ಕಳ್ಳತನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬೈಂದೂರು ಉಪ್ಪುಂದ ನಿವಾಸಿ ಶ್ರೀಧರ್ ಮಡಿವಾಳ (38) ಎಂಬಾತನನ್ನು ಬಂಧಿಸಲಾಗಿದೆ, ಕಳವು ಮಾಡಿದ್ದ ಚಿನ್ನದ ಬಳೆಗಳು, ಚಿನ್ನದ ಸರ ಮತ್ತು ಚಿನ್ನದ ಉಂಗುರ ಒಟ್ಟು 3 ಲಕ್ಷ ರೂ. ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳ್ಳತನದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
- Advertisement -