Tuesday, May 14, 2024
spot_imgspot_img
spot_imgspot_img

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿಯ ಜಾತ್ರೋತ್ಸವ ಸಂದರ್ಭದಲ್ಲಿ ಅನ್ಯಮತೀಯರಿಗೆ ವ್ಯಾಪಾರ ವಹಿವಾಟು ನಿಷೇಧ; ದೇವಾಲಯದ ವಠಾರದಲ್ಲಿ ಬ್ಯಾನರ್‌ ಆಳವಡಿಕೆ

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿಯ ಜಾತ್ರೋತ್ಸವ ಸಂದರ್ಭದಲ್ಲಿ ದೇವಾಲಯದ ವಠಾರದಲ್ಲಿ ಅನ್ಯಮತೀಯರಿಗೆ ವ್ಯಾಪಾರ ವಹಿವಾಟುಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕ ಪ್ಲೇಕ್ಸ್ ಅಳವಡಿಸಿದೆ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಹಿಂದೂಯೇತರರಿಗೆ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಿ ಬ್ಯಾನರ್ ಅಳವಡಿಸಿರುವುದು ಹಲವು ದೇವಾಲಯಗಳಲ್ಲಿ ಕಂಡು ಬಂದಿದ್ದು, ಇನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಗೋಪುರದ ಬಳಿ ಹಿಂದೂ ಸಂಘಟನೆಗಳು ಈ ರೀತಿಯಲ್ಲಿ ಬ್ಯಾನರ್ ಅಳವಡಿಸಿ ಅಚ್ಚರಿ ಮೂಡಿಸಿದೆ.

ಈ ಹಿಂದೆ ಇಂತಹ ಯಾವುದೇ ಸಂಗತಿಗಳು ನಡೆಯದ ಇತಿಹಾಸ‌ ಪ್ರಸಿದ್ಧ ಸುಬ್ರಹ್ಮಣ್ಯ ದೇವಾಲಯದ ಮುಂದೆ ಈ ರೀತಿಯ ಬ್ಯಾನರ್ ಕಂಡುಬಂದಿರುವುದು ಗೊಂದಲ ಮೂಡಿಸಲು ಕಾರಣವಾಗಿದೆ.

- Advertisement -

Related news

error: Content is protected !!