Sunday, May 12, 2024
spot_imgspot_img
spot_imgspot_img

ಕೊಕ್ಕಡ: ಆಟೋ ಚಾಲಕನ ಲವ್ ಜಿಹಾದ್ ಪ್ರಕರಣ; ಇತ್ತಂಡಗಳ ನಡುವೆ ಮಾತಿನ ಚಕಮಕಿ, ಹಲ್ಲೆ ಆರೋಪ; ಪರಿಸ್ಥಿತಿ ಉದ್ವಿಗ್ನ; ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

- Advertisement -G L Acharya panikkar
- Advertisement -

ಬೆಳ್ತಂಗಡಿ: ಬೆಂಗಳೂರು ಮೂಲದ ಯುವತಿಯನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಮುಸ್ಲಿಂ ಆಟೋ ಚಾಲಕ ರಿಜಿಸ್ಟರ್ ಮೂಲಕ ಮದುವೆಯಾಗಿರುವ ಬಗ್ಗೆ ನಿನ್ನೆ ಬಿಸಿಬಿಸಿ ಚರ್ಚೆಗೆ ಗ್ರಸ್ತವಾಗಿತ್ತು. ಈ ನಡುವೆ ಇಂದು ಸಂಜೆ ವೇಳೆ ಕೊಕ್ಕಡ ಪೇಟೆಯಲ್ಲಿ ಮತ್ತೋರ್ವ ಮುಸ್ಲಿಂ ಆಟೋ ಚಾಲಕನಿಗೆ ಹಿಂದೂ ಯುವಕರು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಏನಿದು ಪ್ರಕರಣ:

ಇಂದು ಮುಸ್ಲಿಂ ಚಾಲಕನ ಆಟೋದಲ್ಲಿ ಹಿಂದೂ ಯುವತಿ ಬಂದಿದ್ದು, ಈ ವೇಳೆ ಯುವತಿಯ ಪರ್ಸ್ ನಲ್ಲಿ ಹಣ ಇರಲ್ಲಿಲ್ಲ. ಆಗ ಚಾಲಕ ತನ್ನ ನಂಬರ್ ಕೊಡುತ್ತೇನೆ, ನೀವು ಅದಕ್ಕೆ ಪೇಟಿಎಮ್ ಮಾಡಿ ಎಂದಿದ್ದಾನೆ.

ಆದ್ರೆ ಇಂದು ಸಂಜೆ ಕೊಕ್ಕಡದ ಮುಸ್ಲಿಂ ಆಟೋ ಚಾಲಕನೊಬ್ಬನ ಬಳಿ ಹಿಂದೂ ಯುವಕರು ಬಂದು ನೀವು ಹಿಂದೂ ಯುವತಿಯರಿಗೆ ನಂಬರ್ ನೀಡುತ್ತಿರಾ ಎಂದು ಕೇಳಿದ್ದಾರೆ. ಈ ನಡುವೆ ಎರಡು ತಂಡದ ನಡುವೆ ಗಲಾಟೆ ಹೆಚ್ಚಾಗಿದ್ದು ಈ ವೇಳೆ ಮುಸ್ಲಿಂ ಆಟೋ ಚಾಲಕನೊಬ್ಬನಿಗೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ತಕ್ಷಣ ಮಾಹಿತಿ ಪಡೆದ ಧರ್ಮಸ್ಥಳ ಪಿಎಸ್‌ಐ ಕೃಷ್ಣಕಾಂತ್ ಪಾಟೀಲ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಗಲಾಟೆಯನ್ನು ನಿಯಂತ್ರಣಗೊಳಿಸಿ ಸ್ಥಳದಿಂದ ಎಲ್ಲರನ್ನೂ ಚದುರಿಸಿದ್ದಾರೆ.

- Advertisement -

Related news

error: Content is protected !!