Friday, August 28, 2026
spot_imgspot_img
spot_imgspot_img

ಕೊಲೆಗೈದು ರೈಲ್ವೇ ಹಳಿಗೆ ಶವ ಎಸೆಯಲು ಬಂದ ವೇಳೆ ಪಲ್ಟಿಯಾಗಿ ಹಳಿಗೆ ಬಿದ್ದ ಕಾರು; ಮೃತದೇಹದೊಂದಿಗೆ ಸಿಕ್ಕಿಬಿದ್ದ ಮೂವರು ಆರೋಪಿಗಳು..!

- Advertisement -
- Advertisement -

ಹಾಸನ: ಶಾಂತಿಗ್ರಾಮದ ರೈಲ್ವೆ ಹಳಿಯ ಬಳಿ ಬಿದ್ದ ಕಾರು ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.ಕಾರಿನಲ್ಲಿ ಶವ ಪತ್ತೆಯಾಗಿದೆ.

ಶಾಂತಿಗ್ರಾಮದ ಗಾಡೇನಹಳ್ಳಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಎಂಬಾತನನ್ನು ಕೊಲೆ ಮಾಡಲಾಗಿದ್ದು, ಮೂವರು ಆರೋಪಿಗಳು ಸೇರಿ ಆನಂದ್ ಗೆ ಕೊಲೆ ಮಾಡಿ ಶವವನ್ನು ಮಧ್ಯಾಹ್ಮ ಎಸೆಯಲು ರೈಲ್ವೆ ಹಳಿ ಬಳಿ ಬಂದಿದ್ದರು.ಈ ವೇಳೆ ಕಾರು ಮೇಲಿನಿಂದ ಉರುಳಿ ಬಿದ್ದಿದೆ.ಮೂವರು ಆರೋಪಿಗಳು ಕಾರಿನಲ್ಲಿ ಸಿಲುಕಿಕೊಂಡಿದ್ದರು.

ಈ ಮೂವರು ಆರೋಪಿಗಳು ಡಾಬಾ ಅಕ್ಕಪಕ್ಕದ ಪ್ರದೇಶಗಳ ನಿವಾಸಿಗಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ. ತಿಳಿಸಿದ್ದಾರೆ.

- Advertisement -

Related news

error: Content is protected !!