- Advertisement -
- Advertisement -
ಕಾಸರಗೋಡು: ಗುಂಡೇಟು ತಗುಲಿ ಸಿಪಿಐ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೊಯಿನಾಚಿ ಕರಿಚ್ಚೇರಿಯಲ್ಲಿ ನಡೆದಿದೆ.
ಕರಿಚ್ಚೇರಿ ಯ ಮಾಧವನ್ (65) ಮೃತಪಟ್ಟವರು. ಹಲಸು ಕೊಯ್ಯಲು ಹಿತ್ತಿಲಿಗೆ ತೆರಳಿದ್ದ ಮಾಧವನ್ ರವರು ನೆಲದಲ್ಲಿಟ್ಟಿದ್ದ ಕೋವಿಯನ್ನು ಮೆಟ್ಟಿದಾಗ ಗುಂಡು ಕಾಲಿಗೆ ತಗಲಿದೆ.
ಕಾಡುಹಂದಿಗೆ ಗುರಿ ಇಟ್ಟು ಈ ಕೋವಿಯನ್ನು ಪರಿಸರವಾಸಿಯೊಬ್ಬರು ಹಿತ್ತಿಲಿನಲ್ಲಿ ತಂದಿಟ್ಟಿದ್ದರು ಎನ್ನಲಾಗಿದೆ. ಘಟನೆ ನಡೆದ ಗಂಟೆಗಳ ಬಳಿಕ ಇದು ಮನೆಯವರ ಗಮನಕ್ಕೆ ಬಂದಿದೆ . ಕೂಡಲೇ ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ . ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
- ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್ ನಿಂದ ಸಂಸದ ಪ್ರಜ್ವಲ್ ರೇವಣ್ಣ ಉಚ್ಛಾಟನೆ; ಎಚ್.ಡಿ ಕುಮಾರಸ್ವಾಮಿ..!
- ವಿಟ್ಲ: ಸಮೃದ್ಧಿ ಫ್ಯಾಷನ್ ಡ್ರೆಸ್ ಮಳಿಗೆ ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡು ಶುಭಾರಂಭ
- ಲಾರಿ ಪಲ್ಟಿ: ಇಬ್ಬರು ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ..!
- ಉಡುಪಿ: ಹಾರ್ನ್ ಹಾಕಿದ್ದಕ್ಕೆ ಅಡ್ಡಗಟ್ಟಿ ಬಸ್ ಚಾಲಕನ ಮೇಲೆ ಕಾರು ಚಾಲಕನಿಂದ ಹಲ್ಲೆ..!
- ಉಳ್ಳಾಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು..!
- Advertisement -