- Advertisement -
- Advertisement -
ಸುಳ್ಯ: ಗುತ್ತಿಗಾರು ಗ್ರಾಮದ ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಹಣ ಲಪಟಾಯಿಸಿ ಪರಾರಿಯಾಗುತ್ತಿದ್ದ ತಂಡವನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಕಳೆದ ಹಲವು ದಿನಗಳಿಂದ ಗುತ್ತಿಗಾರಿನ ವ್ಯಾಪಾರ ಮಳಿಗೆಗಳಲ್ಲಿ ಇಬ್ಬರು ಅಪರಿಚಿತ ಯುವಕರು ಗ್ರಾಹಕರ ಸೋಗಿನಲ್ಲಿ ಬಂದು ಒಬ್ಬಾತ ಅಂಗಡಿ ಮಾಲಕರ ನಿಗವನ್ನು ತನ್ನೆಡೆಗೆ ಸೆಳೆದು ಅದೇ ಸಂದರ್ಭದಲ್ಲಿ ಮತ್ತೊಬ್ಬ ಗಲ್ಲಾಪೆಟ್ಟಿಗೆಗೆ ಕೈಹಾಕಿ ಹಣವನ್ನು ಲಪಟಾಯಿಸಿ ಪರಾರಿಯಾಗುತ್ತಿದ್ದರು.
ಆದರೆ ಹತ್ತು ಬಾರಿ ಕದ್ದವ ಒಮ್ಮೆ ಸಿಗುವನು ಎಂಬ ವಿಶ್ವಾಸ ದಂತೆ ಮಾರ್ಚ್ 18ರಂದು ಈ ರೀತಿಯ ಕಳ್ಳತನಕ್ಕೆ ಪ್ರಯತ್ನಿಸಿದಾಗ ಸ್ಥಳೀಯರ ಕೈಗೆ ಸಿಲುಕಿದ ಕಳ್ಳರು ಗೂಸಾ ರುಚಿಯನ್ನು ಅನುಭವಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ರೀತಿಯ ಘಟನೆಗಳು ಹಲವಾರು ಕಡೆಗಳಲ್ಲಿ ನಡೆಯುತ್ತಿದ್ದು ಸಾರ್ವಜನಿಕರು ಎಚ್ಚರವಹಿಸುವಂತೆ ಸ್ಥಳೀಯರು ಜಾಗೃತಿ ಮೂಡಿಸಿದ್ದಾರೆ.
- Advertisement -