Friday, March 29, 2024
spot_imgspot_img
spot_imgspot_img

ಜನರು ಹುಚ್ಚನೆಂದು ಕರೆಯುವಷ್ಟರ ಮಟ್ಟಿಗೆ ದ್ಸಿಕ್ರ್‌ನ ದಾಸರಾಗಿ: ಇಬ್ರಾಹಿಂ ಸಅದಿ ಮಾಣಿ

- Advertisement -G L Acharya panikkar
- Advertisement -

ಮಾಣಿ: ಅಲ್ಲಾಹನ ತೃಪ್ತಿ ಸಂಪಾದಿಸಲು ಔಲಿಯಾಗಳು ದ್ಸಿಕ್ರ್ ಹೇಳುವಾಗ ಆವೇಶದಿಂದ ಹುಚ್ಚೆದ್ದು ಕುಣಿಯುತ್ತಿದ್ದರು ತಿಳಿಯಿರಿ ಸತ್ಯ ವಿಶ್ವಾಸಿಯ ಕೊನೆಯ ಮಾತು ಲಾಇಲಾಹ ಇಲ್ಲಲ್ಲಾಹ್ ಎಂದು ಆದರೆ ಆತನು ಪರಲೋಕದಲ್ಲಿ ವಿಜಯಿಯಾಗಿ ಸ್ವರ್ಗ ಸೇರುವನು, ಆದ್ದುದ್ದರಿಂದ ಜನರು ನಮ್ಮನ್ನು ಹುಚ್ಚ ಎಂದು ಕರೆಯುವ ಹಂತದವರೆಗೂ ದ್ಸಿಕ್ರ್‌ನ ದಾಸರಾಗಿ ಎಂದು ಅಲ್ ಹಾಜ್ ಇಬ್ರಾಹಿಂ ಸಅದಿ ಮಾಣಿ ಹೇಳಿದರು.

ಅವರು ಎಸ್‌ವೈ‌ಎಸ್ ಮತ್ತು ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ಮರ್ಹೂಮ ರುಕಿಯಾ ಮಾಣಿ ಇವರ ಹೆಸರಿನಲ್ಲಿ ಸಂಘಟಿಸಿದ ತಹ್ಲೀಲ್ ಮಜ್ಲಿಸ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಹಿತವಚನ ನೀಡಿದರು, ರಹ್ಮಾನಿಯಾ ಜುಮ್ಮಾ ಮಸೀದಿ ಮಾಣಿ ಇದರ ಖತೀಬ್ ನಝೀರ್ ಅಮ್ಜದಿ ಸರಳಿಕಟ್ಟೆ ದುಆ ನೆರವೇರಿಸಿದರು.

ಮುತ‌ಅಲ್ಲಿಂಗಳಾದ ಇಸಾಕ್ ಮಾಣಿ ಮತ್ತು ಮುಈನ್ ಮಾಣಿ ಬೈತ್ ಆಲಾಪಣೆ ಮಾಡಿದರು, ಕಾರ್ಯಕ್ರಮದಲ್ಲಿ ಶಬೀರ್ ಅಹ್ಸನಿ ದಾರುಲ್ ಇರ್ಶಾದ್,ಎಸ್‌ವೈ‌ಎಸ್ ಮಾಣಿ ಸೆಂಟರ್ ನಾಯಕರಾದ ಸುಲೈಮಾನ್ ಸೂರಿಕುಮೇರು,ಹಾಜಿ ಯೂಸುಫ್, ಅಬ್ದುಲ್ ಕರೀಂ ನೆಲ್ಲಿ,ಹಮೀದ್ ಮಾಣಿ.

ಬ್ಲಡ್ ಹೆಲ್ಪ್‌ಕೇರ್‌ನ ಕೆಪಿ ಬಾತಿಶ್ ತೆಕ್ಕಾರ್, ಅಶ್ರಫ್ ಪಾರ್ಪಜೆ, ಇಬ್ರಾಹಿಂ ಶೇರಾ, ಹಂಝ ಕಾಯರಡ್ಕ, ಮುಬಶ್ಶಿರ್ ಸೂರಿಕುಮೇರು, ಹಾರಿಸ್ ಯೂಸುಫ್ ಸೂರಿಕುಮೇರು, ಇಮ್ರಾನ್ ಸೂರಿಕುಮೇರು, ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು, ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!